ಬೆಂಗಳೂರು: ಪ್ರಾಪರ್ಟಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದ್ದು ವ್ಯಕ್ತಿ ಒಬ್ಬರಿಗೆ ಚಾಕು ಇರಿಯಲಾಗಿದೆ. ಬೈಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕಲ್ಯಾಣ್ ಎಂಬಾತನಿಗೆ ಎದುರಾಳಿಗಳು ಚಾಕು ಇರಿದಿದ್ದಾರೆ.
ಪ್ರಾಪರ್ಟಿ ವಿಚಾರದಲ್ಲಿ ಪ್ರಾಪರ್ಟಿ ಹೋಲ್ಡರ್ ಮತ್ತು ಗಾಯಾಳು ಕಲ್ಯಾಣ್ ಮದ್ಯೆ ಆಗಾಗ ಮಾತುಕತೆ ಆಗುತ್ತಿತ್ತು. ಹೀಗೆಯೇ ಇಂದು ಇಬ್ಬರ ಮಧ್ಯೆ ಮಾತುಕತೆ ನಡೆಯುವಾಗ ಎದುರಾಳಿಗಳು ಕಲ್ಯಾಣ್ ಗೆ ಚಾಕು ಇರಿದಿದ್ದಾರೆ.
ಈ ವೇಳೆ ಆಳವಾದ ಗಾಯಕ್ಕೆ ಒಳಗಾಗಿರುವ ಕಲ್ಯಾಣ್ ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.