ಸಂಡೂರು: ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೆ.75 ಈಡೇರಿಸದ ಪಕ್ಷಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಮುಜುಗರಕ್ಕೆ ಈಡುಮಾಡಿದ ಉಗ್ರಪ್ಪ; ‘ತಿಂದಿದ್ದು ಅರಗಲ್ವಾ?’ ಎಂದು ಉಗ್ರಪ್ಪ ಬಾಯ್ಮುಚ್ಚಿಸಿದ ಸಿದ್ದು..
ಕೃಷ್ಣಾನಗರದ ಶಾಸಕರ ಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬುಧವಾರ ಮಾತನಾಡಿದರು. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕೊಟ್ಟ ಮಾತಿನಲ್ಲಿ ಕನಿಷ್ಠ ಶೇ.10 ಕೂಡ ನೆರವೇರಿಸಲಿಲ್ಲ. ಪ್ರಜೆಗಳಿಗೆ ಬೆಲೆ ಏರಿಕೆ ಬರೆ ಹಾಕಿತು ಎಂದರು ಆರೋಪಿಸಿದರು.