ನಾಪೋಕ್ಲು: ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರಿಂದ ಪ್ರವಾಸಿಗರ ಹತ್ಯೆ ಖಂಡಿಸಿ ಶುಕ್ರವಾರ ನಾಪೋಕ್ಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ಪಹಲ್ಗಾಮ್ನಲ್ಲಿ ಅಮಾಯಕ ಹಿಂದೂಗಳ ಹತ್ಯೆ ಖಂಡನೀಯ. ದೇಶದಲ್ಲಿ ಹಿಂದುಗಳ ಮೇಲೆ ಪದೇಪದೇ ದೌಜನ್ಯ ನಡೆಸಲಾಗುತ್ತಿದೆ. ಭಾರತ ಅಖಂಡವಾದುದು. ಭಾರತೀಯತೆ ದೇಶದ ಜೀವಾಳ. ಸ್ವಾತಂತ್ರ್ಯ ಬಂದ ನಂತರ ನಾಯಕರ ಅಧಿಕಾರದ ಹಪಾಹಪಿಯಿಂದ ದೇಶ ಛಿದ್ರವಾಗುತಿದೆ. ಭಾರತೀಯರು ಯಾರಿಗೂ ತೊಂದರೆ ಮಾಡಿದ ನಿದರ್ಶನಗಳಿಲ್ಲ. ದೇಶವನ್ನು ಕೊಳ್ಳೆಹೊಡೆಯಲು ಬಂದ ಮಂದಿ ಸಂಪತ್ತನ್ನು ದೋಚಿದರು. ಇದೀಗ ಧರ್ಮದ ಮೇಲೆ ಯುದ್ಧವನ್ನು ಸಾರಲಾಗುತ್ತಿದೆ. ಹಿಂದೂ ಧರ್ಮ ಯಾರಿಗೂ ದ್ರೋಹ ಬಗೆದಿಲ್ಲ ಸರ್ವೇ ಜನ ಸುಖಿನೋ ಭವಂತು ಎಂಬ ತತ್ವದಲ್ಲಿ ಭಾರತೀಯರು ಜೀವನ ಸಾಗಿಸುತ್ತಿದ್ದಾರೆ. ನಿರಾಶ್ರಿತರಿಗೆ ದೇಶ ಆಶ್ರಯ ನೀಡಿದೆ. ಆದರೂ ಭಯೋತ್ಪಾದಕ ಕೃತ್ಯಗಳ ಮೂಲಕ ಇಲ್ಲಿನ ಪ್ರಮುಖ ಧರ್ಮಕ್ಕೆ ಅಪಚಾರ ಎಸಗಲಾಗುತ್ತಿದೆ ಎಂದರು. ಹಿಂದೂ ಧರ್ಮಕ್ಕೆ ಅಳಿವು ಇಲ್ಲ. ಎಷ್ಟೇ ದುಷ್ಕೃತ್ಯಗಳನ್ನು ನಡೆಸಿದರೂ ಹಿಂದೂ ಧರ್ಮವೂ ಸಂಘಟಿತವಾಗುತ್ತದೆ ಎಂದರು. ಭಯೋತ್ಪಾದಕರ ನಿಗ್ರಹಕ್ಕೆ ನ್ಯಾಯಾಂಗ ಹಾಗೂ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವಂತೆ ಈ ಸಂದರ್ಭ ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕಂಗಾಂಡ ಜಾಲಿ ಪೂವಪ್ಪ, ಬಿ.ಎಂ.ಪ್ರತೀಪ, ಬಿದ್ದಾಟಂಡ ತಮ್ಮಯ್ಯ , ರಾಧಾಕೃಷ್ಣ ರೈ, ಕೇಲೇಟಿರ ದೀಪು ದೇವಯ್ಯ, ಕೇಟೋಳಿರ ಹರೀಶ್ ಪೂವಯ್ಯ , ಕೇಲೇಟಿರ ದೀಪು ದೇವಯ್ಯ , ಬಿದ್ದಾಟಂಡ ಜಿನ್ನು ನಾಣಯ್ಯ , ಸಂಪತ್, ಕುಲ್ಲೆಟ್ಟಿರ ಅಜಿತ್ ನಾಣಯ್ಯ, ಅಮ್ಮಂಡ ಮಹೇಶ್, ಕೇಲೇಟಿರ ಸಾಬು ನಾಣಯ್ಯ, ಮೂವೆರ ಪಟ್ಟು ಪೆಮ್ಮಯ್ಯ, ಶಿವಚಾಳಿಯಂಡ ಜಗದೀಶ್, ಉಮಾ ಪ್ರಭು , ಎಂ.ಎಂ.ನರೇಂದ್ರ, ಬೊಳ್ಯಪಡ ಜಾನ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ನಾಟೋಳಂಡ ಸಚಿನ್, ಬಾಲೆಯಡ ಮೇದಪ್ಪ, ಕೇಟೋಳಿರ ಗಣಪತಿ ಮತ್ತಿತರರು ಇದ್ದರು.
