ಸಿದ್ದರಾಮಯ್ಯ ಕಾಂಗ್ರೆಸ್​ಗೇ ಭಸ್ಮಾಸುರ, ಕಿಚ್ಚನ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಡುತ್ತೆ: ಪ್ರತಾಪ್​ಸಿಂಹ

ಮೈಸೂರು: ನಟ ಕಿಚ್ಚ ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಡುತ್ತಿದೆ ಎಂದಿರುವ ಕೊಡಗು-ಮೈಸೂರು ಸಂಸದ ಪ್ರತಾಪ್​ಸಿಂಹ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಭಸ್ಮಾಸುರ ಎಂದು ಹೇಳಿದ್ದಾರೆ. ನಂಜನಗೂಡಿನಲ್ಲಿ ಇಂದು ಬಹಿರಂಗ ಸಮಾವೇಶದಲ್ಲಿ ಅವರು ಈ ಮಾತನ್ನಾಡಿದರು. ಹಳೇ ಮೈಸೂರು ಕಾಂಗ್ರೆಸ್-ಜೆಡಿಎಸ್ ಎಂಬ ಜಾತಿ ವ್ಯವಸ್ಥೆ ಪಕ್ಷಗಳ ಭದ್ರಕೋಟೆಯಲ್ಲ. ಇದು ಅಭಿವೃದ್ಧಿ ಪರವಾದ ಬಿಜೆಪಿಯ ಭದ್ರಕೋಟೆ ಆಗಬೇಕು ಎಂದ ಪ್ರತಾಪ್​ಸಿಂಹ, ನಟ ಸುದೀಪ್ ಕಾಂಗ್ರೆಸ್ ಕಚೇರಿಗೇ ಕಿಚ್ಚು ಹಚ್ಚಿದ್ದಾರೆ ಎಂದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ … Continue reading ಸಿದ್ದರಾಮಯ್ಯ ಕಾಂಗ್ರೆಸ್​ಗೇ ಭಸ್ಮಾಸುರ, ಕಿಚ್ಚನ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಡುತ್ತೆ: ಪ್ರತಾಪ್​ಸಿಂಹ