ಮಾನಸಿಕ ಅಸಮತೋಲನ ನಿವಾರಣೆಗೆ ಪ್ರಾಣಶಕ್ತಿ

blank

ಮಾನಸಿಕ ಅಸಮತೋಲನ ನಿವಾರಣೆಗೆ ಪ್ರಾಣಶಕ್ತಿ

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

www.isha.sadhguru.org)

ನಾವು ನಮ್ಮ ಜೀವನದ ಅನೇಕ ಅಂಶಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನಿರ್ವಹಿಸುತ್ತಿದ್ದೇವೆ. ಇದಕ್ಕೆ ಖಂಡಿತವಾಗಿಯೂ ಬೆಲೆ ತೆರಬೇಕಾಗುತ್ತದೆ. ಮುಂದಿನ ಐವತ್ತು ವರ್ಷಗಳಲ್ಲಿ ನಮ್ಮ ಜೀವನಶೈಲಿಯಲ್ಲಿನ ವಿವಿಧ ಅಂಶಗಳೇ ನಮಗೆ ಮುಳುವಾಗುತ್ತವೆ. ಮಾನಸಿಕ ಅಸಮತೋಲನ, ಗೊಂದಲ ಜಾಸ್ತಿಯಾಗುತ್ತದೆ. ವಿಕೃತ ಜನರ ಸಂಖ್ಯೆ ಹಲವು ಪಟ್ಟು ಹೆಚ್ಚಾಗುತ್ತದೆ.

blank

ಪ್ರಾಣ ಎಂದರೆ ಪ್ರಾಣ ಶಕ್ತಿ (ಜೀವ ಶಕ್ತಿ). ನೀವು ಜೀವನದಲ್ಲಿ ಏನೇ ಮಾಡಿದರೂ ನಿಮ್ಮ ದೇಹ, ಮನಸ್ಸು ಮತ್ತು ಇಡೀ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಅಂತಿಮವಾಗಿ ನಿಮ್ಮ ಪ್ರಾಣಶಕ್ತಿಯಿಂದ ನಿರ್ಧರಿತವಾಗುತ್ತದೆ. ದೇಹದಲ್ಲಿ ಪ್ರಾಣದ ಐದು ಮೂಲ ಅಭಿವ್ಯಕ್ತಿಗಳಿವೆ- ಪ್ರಾಣ ವಾಯು, ಸಮಾನ ವಾಯು, ಉದಾನ ವಾಯು, ಅಪಾನ ವಾಯು ಮತ್ತು ವ್ಯಾನ ವಾಯು – ಇವು ಮಾನವ ಶರೀರ ವ್ಯವಸ್ಥೆಯ ವಿಭಿನ್ನ ಅಂಶಗಳನ್ನು ನಿರ್ದೇಶಿಸುತ್ತವೆ. ಯೋಗಾಭ್ಯಾಸಗಳ ಮೂಲಕ, ನೀವು ಅವುಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು.

ಪರಿವರ್ತನೆಗೆ ‘ವಾಯು’ ತತ್ವ: ಉಸಿರಾಟದ ಅಂಶವನ್ನು ಒಳಗೊಂಡಿರುವ ಹೆಚ್ಚಿನ ಯೋಗಾಸನಗಳು, ಪ್ರಾಣ ವಾಯು ಮತ್ತು ವಾಯು ತತ್ವದ ಅಂಶವನ್ನು ಗುರಿಯಾಗಿಸಿಕೊಂಡಿವೆ. ನಾವು ಉಸಿರಾಡುವ ಗಾಳಿಯ ಗುಣಮಟ್ಟ ಮತ್ತು ನಾವು ಹೇಗೆ ಉಸಿರಾಡುತ್ತೇವೆ ಎಂಬುದು ಜನರ ಜೀವನದ ಮೇಲ್ಪದರದ ಅನುಭವವನ್ನು ಹೆಚ್ಚಾಗಿ ನಿರ್ಧರಿಸುತ್ತದೆ. ಗಾಳಿಯೊಂದಿಗೆ ನಾವು ಏನು ಮಾಡಬಹುದು? ನಾವು ಅದನ್ನು ಮಲಿನಗೊಳಿಸಬಹುದು ಅಥವಾ ಅದನ್ನು ಶುದ್ಧೀಕರಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ, ನಾವು ಗಾಳಿಯನ್ನು ನಮ್ಮ ಜೀವನದಲ್ಲಿ ಪರಿವರ್ತನೆಯ ಶಕ್ತಿಯಾಗಿ ಬಳಸಬಹುದು. ಇಂದು ಸುಮಾರು ಶೇ. 99ರಷ್ಟು ಜನರು ಸಾಧಾರಣವಾಗಿ ಆಹ್ಲಾದಕರ ಮತ್ತು ಯಶಸ್ವಿ ರೀತಿಯಲ್ಲಿ ಜಗತ್ತಿನಲ್ಲಿ ತಮ್ಮ ದಾರಿಯನ್ನು ಹೇಗೆ ಕಂಡುಕೊಳ್ಳುವುದು ಎಂಬುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ.

ಜೀವನದ ಮತ್ತೊಂದು ಆಯಾಮದ ಬಗ್ಗೆ ಗ್ರಹಿಕೆಯನ್ನು ಹೊಂದಲು ಬಯಸುವವರು ಬಹಳ ಕಡಿಮೆ. ಈ ಸಂದರ್ಭದಲ್ಲಿ, ಪ್ರಾಣ ವಾಯು ಅತ್ಯಂತ ಮಹತ್ವಪೂರ್ಣವಾಗುತ್ತದೆ. ಗಾಳಿ ಅಥವಾ ವಾಯುವಿನಲ್ಲಿ ಒಂದು ನಿರ್ದಿಷ್ಟ ತ್ವರಿತ ಗುಣವಿದೆ, ಇದು ಅದನ್ನು ಬಹಳ ಪ್ರತಿಕ್ರಿಯಾಶೀಲವಾಗಿಸುತ್ತದೆ ಮತ್ತು ಅದು ಬಹಳ ಬೇಗ ಬದಲಾಗುವ ಅಥವಾ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ನೀಡುತ್ತದೆ. ಈ ಪ್ರಾಣದ ಮೇಲೆ ನಿರ್ದಿಷ್ಟ ಮಟ್ಟದ ಪ್ರಭುತ್ವವು ತಕ್ಷಣವೇ ಬುದ್ಧಿಶಕ್ತಿಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಭಾವನೆಗಳು ಸ್ವಲ್ಪ ಹೆಚ್ಚು ಸ್ಥಿರ, ವ್ಯವಸ್ಥಿತ ಮತ್ತು ಮಧುರವಾಗುತ್ತವೆ. ಮತ್ತು ನೀವು ಕೆಲವು ದೈಹಿಕ ಚಟುವಟಿಕೆಗಳನ್ನು ಹಿಂದೆ ಮಾಡಿದ್ದಕಿಂತಲೂ ಉತ್ತಮವಾಗಿ ಮಾಡಬಹುದು. ಹೆಚ್ಚಿನ ಜನರಿಗೆ, ಜೀವನದಲ್ಲಿ ಅವರು ಬಯಸುವುದೆಲ್ಲವೂ ಈ ಮೂರು ಅಂಶಗಳೇ ಆಗಿವೆ.

ನಾವು ಉಸಿರಾಡುವ ಗಾಳಿಯ ಪರಿಣಾಮವು ಬಹಳ ತ್ವರಿತವಾಗಿರುತ್ತದೆ. ನೀವು ನಿಮ್ಮ ಶರೀರ ವ್ಯವಸ್ಥೆಗೆ ಹಾನಿ ಉಂಟುಮಾಡದೆ 8ರಿಂದ 10 ದಿನಗಳ ಕಾಲ ಆಹಾರವಿಲ್ಲದೆ ಇರಬಹುದು. ವ್ಯವಸ್ಥೆಗೆ ಹಾನಿ ಉಂಟುಮಾಡದೆ ಮೂರೂವರೆ ದಿನಗಳವರೆಗೆ ನೀರಿಲ್ಲದೆ ಇರಬಹುದು. ಆದರೆ ಹೆಚ್ಚಿನ ಜನರು ಮೂರೂವರೆಯಿಂದ ಐದು ನಿಮಿಷಗಳ ಕಾಲ ಮಾತ್ರ ಗಾಳಿಯಿಲ್ಲದೆ ಇರಬಲ್ಲರು. ಕೆಲವು ಅಭ್ಯಾಸದೊಂದಿಗೆ, ನೀವು ಇನ್ನೂ ಹೆಚ್ಚಿನ ಸಮಯ ಗಾಳಿಯಿಲ್ಲದೆ ಇರಬಹುದು, ಆದರೆ ಇದು ಸ್ವಲ್ಪ ಮೋಸವನ್ನು ಒಳಗೊಂಡಿರುತ್ತದೆ. ನಿಮ್ಮ ದೇಹದ ಚಯಾಪಚಯ (ಮೆಟಬಾಲಿಸಮ್ ಚಟುವಟಿಕೆಯನ್ನು ಬಹಳ ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಲು ನಿಮಗೆ ಸಾಧ್ಯವಾದರೆ, ನಿಮ್ಮ ಮೂಗಿನ ಮೂಲಕ ಉಸಿರಾಡುವ ಅಗತ್ಯವಿರುವುದಿಲ್ಲ. ಆದರೆ ನೀವು ನಿಮ್ಮ ಚರ್ಮದ ಮೂಲಕ ಉಸಿರಾಡಬಹುದು. ಬೆವರು ಇರುವಂತೆ, ಉಸಿರಾಟವೂ ಇದೆ, ಅಥವಾ ಚರ್ಮದ ಮೂಲಕ ನಡೆಯುವ ಗಾಳಿಯ ಚಲನೆ. ನೀವು ಪ್ರಾಣ ವಾಯುವನ್ನು ಗಮನಾರ್ಹವಾಗಿ ಸಕ್ರಿಯಗೊಳಿಸಿದರೆ, ನೀವು ನಿಮ್ಮ ಮೂಗಿನ ಮೂಲಕ ಉಸಿರಾಡದೆ ಹೆಚ್ಚಿನ ಅವಧಿಗೆ ಬದುಕಬಹುದು.

ಪಂಚ ಭೂತಗಳಲ್ಲಿ, ಗಾಳಿ ಅಥವಾ ವಾಯು ತತ್ವವು ಗರಿಷ್ಠ ಶಕ್ತಿಯನ್ನು ಉತ್ಪಾದಿಸಬಲ್ಲ ಒಂದು ತತ್ವವಾಗಿದೆ. ಇದು ಹೊರಗಿನ ವಾತಾವರಣದಲ್ಲಿ ಮತ್ತು ಮಾನವ ಶರೀರ ವ್ಯವಸ್ಥೆ ಎರಡರಲ್ಲೂ ನಿಜ. ನೀವು ಅದನ್ನು ಸಕ್ರಿಯಗೊಳಿಸಲು ಕಲಿತರೆ, ಅದು ನಿಮ್ಮನ್ನು ಅಸಾಧಾರಣವಾದ ಬಲಶಾಲಿಯನ್ನಾಗಿ ಮಾಡುತ್ತದೆ – ಕೇವಲ ಸ್ನಾಯುಗಳನ್ನು ಕುರಿತಾದ ಬಲ ಎಂದೇನೂ ಅಲ್ಲ – ಆದರೆ ಜೀವನದ ದೃಷ್ಟಿಯಿಂದ. ನಿಮ್ಮ ಶಕ್ತಿಯು ನಿಮ್ಮನ್ನು ಅಸಾಧಾರಣವಾಗಿಸುತ್ತದೆ. ನಿಮಗೆ ಮಿತಿಯಿಲ್ಲದ ಶಕ್ತಿ ಇರುವಂತೆ ಕಾಣುತ್ತದೆ. ಮಿತಿಯಿಲ್ಲದ ಶಕ್ತಿ ಎಂಬುದೇನೂ ಇಲ್ಲ – ಕೇವಲ ಇತರ ಜನರ ದೃಷ್ಟಿಯಲ್ಲಿ, ಅದು ಹಾಗೆ ಕಾಣುತ್ತದೆ.

ನಿಮ್ಮ ಪ್ರಾಣ ವಾಯು ನಿಜವಾಗಿಯೂ ಸಕ್ರಿಯವಾಗಿದ್ದರೆ, ನೀವು ನಿಮ್ಮ ‘ಸಮಯ’ವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಜೀವನವು ಸಮಯ ಮತ್ತು ಶಕ್ತಿಯ ಸಂಯೋಜನೆಯಾಗಿದೆ. ನೀವು ನಿಮ್ಮ ಶಕ್ತಿ ಅಥವಾ ಪ್ರಾಣ ವಾಯುವನ್ನು ಬಹಳ ತೀವ್ರವಾಗಿ ಇಟ್ಟುಕೊಂಡಲ್ಲಿ, ನಿಮಗೆ ಹೆಚ್ಚಿನ ಸಮಯ ಸಿಗುವಂತೆ ಕಾಣುತ್ತದೆ. ಜನರು ಸಮಯವನ್ನು ಹೆಚ್ಚಿಸಲು ನಿರಾಶೆಯಿಂದ ಪ್ರಯತ್ನಿಸುತ್ತಿದ್ದಾರೆ, ಆದರೂ ಅದು ನಿಮಗೆ ಮತ್ತು ನನಗೆ ಒಂದೇ ವೇಗದಲ್ಲಿ ಸಾಗುತ್ತಿದೆ. ಆದರೆ ನೀವು ನಿಮ್ಮ ಶಕ್ತಿಯನ್ನು ಚೆನ್ನಾಗಿ ನಿರ್ವಹಿಸಿಕೊಂಡರೆ, ಬೇರೆಯವರು ಹತ್ತು ವರ್ಷಗಳಲ್ಲಿ ಮಾಡುವುದನ್ನು ನೀವು ಒಂದು ವರ್ಷದಲ್ಲಿ ಮಾಡಬಹುದು. ಅಂದರೆ ನೀವು ನೂರು ವರ್ಷ ಬದುಕಿದರೆ, ಜನರ ಅನುಭವದಲ್ಲಿ ನೀವು ಸಾವಿರ ವರ್ಷ ಬದುಕಿದಂತಾಗುತ್ತದೆ. ಅನುಭವದ ಆಳ ಮತ್ತು ಪರಿಣಾಮದ ದೃಷ್ಟಿಯಿಂದ, ನೀವು ನಿಮ್ಮ ಶಕ್ತಿಯನ್ನು ನಿರ್ವಹಿಸಿದ್ದರಿಂದ ನಿಮ್ಮ ಸಮಯ ಹೆಚ್ಚಾಗುತ್ತದೆ. ಚಟುವಟಿಕೆಯು ಪ್ರಯತ್ನದಿಂದ ಅಲ್ಲ, ನಿಮ್ಮ ಶಕ್ತಿಯ ಉಕ್ಕುವಿಕೆಯಿಂದ ನಡೆಯುತ್ತದೆ.

ಪ್ರಾಣಶಕ್ತಿಯ ಜವಾಬ್ದಾರಿ: ದೈಹಿಕ ಆರೋಗ್ಯವನ್ನು ಬಾಹ್ಯ ಕಾರಣಗಳಿಗಾಗಿ ನೂರು ಪ್ರತಿಶತ ಖಾತ್ರಿಪಡಿಸಲಾಗುವುದಿಲ್ಲ. ಆದರೆ ನೀವು ನಿಮ್ಮ ಪ್ರಾಣಶಕ್ತಿಯ ಜವಾಬ್ದಾರಿಯನ್ನು ವಹಿಸಿಕೊಂಡರೆ, ಮಾನಸಿಕ ಯೋಗಕ್ಷೇಮವನ್ನು ನೂರು ಪ್ರತಿಶತ ಖಾತ್ರಿಪಡಿಸಬಹುದು. ನೀವು ಮಾನಸಿಕವಾಗಿ ಅತ್ಯಂತ ಉತ್ತಮ ಸ್ಥಿತಿಯಲ್ಲಿದ್ದರೆ, ಕೆಲವು ದೈಹಿಕ ಸಮಸ್ಯೆಗಳು ತೊಂದರೆಯಾಗುವುದಿಲ್ಲ. ಹೆಚ್ಚಿನ ಸಮಯದಲ್ಲಿ, ಸಣ್ಣದಾದ ದೈಹಿಕ ಸ್ಥಿತಿಗಳಿಗಿಂತ, ಅವುಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಆಗುವ ಪ್ರತಿಕ್ರಿಯೆಗಳೇ ಸಮಸ್ಯೆಯಾಗಿರುತ್ತವೆ. ನಿಮ್ಮ ಕೈ ಏನಾದರೂ ತಾನೇ ತಾನಾಗಿ ನಿಮ್ಮ ಕಣ್ಣನ್ನು ಚುಚ್ಚುವುದು, ಕೆರೆಯುವುದು, ಹೊಡೆಯುವುದು ಮಾಡಿದರೆ – ಅದು ಒಂದು ಕಾಯಿಲೆಯಿದ್ದಂತೆ. ಹೆಚ್ಚಿನ ಜನರ ಮನಸ್ಸು ಹೀಗೆಯೇ ಇರುತ್ತದೆ. ಪ್ರತಿದಿನ, ಅದು ಅವರನ್ನು ಒಳಗಿನಿಂದ ಚುಚ್ಚುತ್ತದೆ, ಅಳಿಸುತ್ತದೆ, ಕೂಗಿಸುತ್ತದೆ ಅಥವಾ ಚಿಂತಿಸುವಂತೆ ಮಾಡುತ್ತದೆ – ಹಲವಾರು ರೀತಿಯಲ್ಲಿ, ಅದು ಅವರಿಗೆ ನೋವನ್ನು ಸೃಷ್ಟಿಸುತ್ತದೆ. ಅದರರ್ಥ ಅದು ಕಾಯಿಲೆಯಾಗಿದೆ, ಅದು ಸಾಮಾಜಿಕವಾಗಿ ಒಪ್ಪಿಕೊಳ್ಳುವ ರೀತಿಯಲ್ಲಿ ಇದ್ದರೂ ಸಹ. ಈಗ ಹೆಚ್ಚಿನ ಜನರು ಮಾನಸಿಕವಾಗಿ ಅಸಮತೋಲನದಲ್ಲಿದ್ದಾರೆ, ಆದರೆ ವೈದ್ಯಕೀಯವಾಗಿ ಪ್ರಮಾಣಿತರಾಗಿಲ್ಲ ಅಷ್ಟೆ.

ಮಾನವರು ದಿನದಿಂದ ದಿನಕ್ಕೆ ಅನುಭವಿಸುತ್ತಿರುವ ಎಲ್ಲಾ ರೀತಿಯ ನೋವುಗಳು ಮನಸ್ಸಿನಲ್ಲಿ ಸೃಷ್ಟಿಯಾಗುತ್ತವೆ. ಈ ಕಾಯಿಲೆ ಈಗ ಪ್ರಾರಂಭವಾಗಿದ್ದು, ಅದು ಸಾಮಾಜಿಕ ರಚನೆಗಳು, ನಮ್ಮ ಸುತ್ತಲಿನ ತಂತ್ರಜ್ಞಾನ ಮತ್ತು ಇತರ ವಿವಿಧ ಪ್ರಭಾವಗಳಿಂದಾಗಿ ಹೆಚ್ಚಾಗುತ್ತದೆ. ನಾವು ಈಗ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಐವತ್ತು ವರ್ಷಗಳಲ್ಲಿ, ನಮ್ಮ ಜೀವನಶೈಲಿಯಲ್ಲಿನ ವಿವಿಧ ಅಂಶಗಳಿಂದಾಗಿ ಮಾನಸಿಕವಾಗಿ ಅಸಮತೋಲನ, ಗೊಂದಲ ಅಥವಾ ವಿಕೃತಿಗೊಂಡ ಜನರ ಸಂಖ್ಯೆ ಹಲವು ಪಟ್ಟು ಹೆಚ್ಚಾಗುತ್ತದೆ. ನಾವು ನಮ್ಮ ಜೀವನದ ಅನೇಕ ಅಂಶಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನಿರ್ವಹಿಸುತ್ತಿದ್ದೇವೆ, ಇದಕ್ಕೆ ನಾವು ಬೆಲೆ ತೆರಬೇಕಾಗುತ್ತದೆ.

ನೀವು ನಿಮ್ಮ ಪ್ರಾಣಶಕ್ತಿಯ ಜವಾಬ್ದಾರಿಯನ್ನು ವಹಿಸಿಕೊಂಡರೆ, ಹೊರಗಿನ ಪರಿಸ್ಥಿತಿ ಏನೇ ಇದ್ದರೂ, ನೀವು ಮಾನಸಿಕವಾಗಿ ಸಮತೋಲನದಲ್ಲಿ ಇರುತ್ತೀರಿ. ಪ್ರತಿಯೊಬ್ಬರೂ ಮಾಡಬಹುದಾದ ವಿವಿಧ ರೀತಿಯ ವಿಧಾನಗಳು ಲಭ್ಯವಿವೆ. ನಿಮ್ಮೊಳಗಿನ ಮೂಲಭೂತ ಜೀವಶಕ್ತಿಯು ಕಾರ್ಯ ನಿರ್ವಹಿಸುವ ರೀತಿಯನ್ನು ಸುಧಾರಿಸಲು ಸಂಪೂರ್ಣ ವಿಜ್ಞಾನ ಮತ್ತು ತಂತ್ರಜ್ಞಾನದ ಮಾರ್ಗಗಳೇ ಇವೆ.

ಖೋ ಖೋ ವಿಶ್ವಕಪ್​ನಲ್ಲಿ ಟಿ. ನರಸೀಪುರ ಪ್ರತಿಭೆ ಸಾಧನೆ; ಮಗಳ ಪರಿಶ್ರಮ ನೆನೆದು ಪೋಷಕರು ಭಾವುಕ, ತಂದೆ ಹೇಳಿದ್ದಿಷ್ಟು | B Chaitra

 

Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…