ವಿದ್ಯುತ್ ನಿಲುಗಡೆ
ಗದಗ: 110/11 ಕೆವ್ಹಿ ಗಜೇಂದ್ರಗಡ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಗಜೇಂದ್ರಗಡ ಮತ್ತು ಉಣಚಗೇರಿ ಪಟ್ಟಣ ಹಾಗೂ ಗ್ರಾಮಗಳಾದ ಕುಂಟೋಜಿ, ವೀರಾಪೂರ, ಮ್ಯಾಕಲಜೇರಿ, ಬೆಣಸಮಟ್ಟಿ, ರಾಂಪೂರ, ಹೊಸರಾಂಪ್ರರ, ಕುಂಟೋಜಿ, ರಾಜೂರು, ಜಿಗೇರಿ, ಭೈರಾಪೂರ, ಭೈರಾಪೂರ ತಾಂಡಾ, ವದೇಗೋಳ,ದಿಂಡೂರು, ಪುರ್ತಗೇರಿ,ಗೌಡಗೇರಿ, ಗೋಗೇರಿ, ಕಾಲಕಾಲೇಶ್ವರ, ನಾಗರಸಿಕೊಪ್ಪ, ನಾಗರಸಿಕೊಪ್ಪ ತಾಂಡಾ, ಮಾಟರಂಗಿ, ಚಿಲಝರಿ, ಕೊಡಗನೂರು, ಹಿರೇಕೊಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.