ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

ಉತ್ತರಾಖಂಡ: ವಿಶ್ವ ಪ್ರಸಿದ್ಧ ಕೇದಾರನಾಥನ ದರುಶನಕ್ಕೆ ಪ್ರತಿ ವರ್ಷವೂ ಈ ಸಮಯದಲ್ಲಿ ಜನಸಾಗರವೇ ಹರಿದು ಬರುತ್ತಿತ್ತು. ತಮ್ಮ ಇಷ್ಟದ ಶಿವನ ಅಲಂಕಾರವನ್ನು ಕಣ್ತುಂಬಿಸಿಕೊಳ್ಳಲು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಧನ್ಯರಾಗುತ್ತಿದ್ದರು. ಆದರೆ ಈ ಬಾರಿಯ ಲಾಕ್​ಡೌನ್​ ಎಲ್ಲವನ್ನೂ ಕಸಿದುಕೊಂಡಿದೆ. ಕರೊನಾ ವೈರಸ್​ ಭೀತಿಯಿಂದಾಗಿ ಎಲ್ಲಾ ದೇವಾಲಯಗಳಂತೆ ಕೇದಾರನಾಥನಿಗೂ ಬೀಗ ಹಾಕಲಾಗಿದೆ. ಆದರೆ ತಲೆತಲಾಂತರಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಇಂದು ಬೆಳಗ್ಗೆ 6.10ಕ್ಕೆ ದೇವಾಲಯವನ್ನು ತೆರೆಯಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಖ್ಯದ್ವಾರವನ್ನಷ್ಟೇ ತೆರೆಯಲಾಗಿದೆ. ಶಿವನಿಗೆ 10 ಕ್ವಿಂಟಲ್​ ಹೂವುಗಳಿಂದ ಅಲಂಕರಿಸಿ … Continue reading ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?