ವಿಜಯನಗರ ಜಿಲ್ಲಾ ರಚನೆ ಯಾರಿಗೆ ಲಾಭ- ನಷ್ಟ : ಮುಂದುವರಿದಿದೆ ರಾಜಕೀಯ ಲೆಕ್ಕಾಚಾರ

ಬೆಂಗಳೂರು: ವಿಜಯನಗರ ಜಿಲ್ಲೆ ರಚನೆಯಾಗಬೇಕು ಎಂಬ ಬಹುಕಾಲದ ಬೇಡಿಕೆಗೆ ಯಡಿಯೂರಪ್ಪ ಸರ್ಕಾರ ಇಂದು ತಾತ್ತ್ವಿಕ ಒಪ್ಪಿಗೆ ಸೂಚಿಸಿದೆ. ಬಳ್ಳಾರಿಯ ನಾಯಕರು ವಿಜಯನಗರ ಜಿಲ್ಲಾ ರಚನೆ ವಿರೋಧಿಸುತ್ತಲೇ ಬಂದಿದ್ದರು. ಹೊಸಪೇಟೆ ಕೇಂದ್ರಿತವಾಗಿ ವಿಜಯನಗರ ಜಿಲ್ಲಾ ರಚನೆಯ ಬೇಡಿಕೆ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಹೀಗಾಗಿ, ಸರ್ಕಾರದ ನಿರ್ಣಯದೊಂದಿಗೆ ವಿಜಯನಗರ ಜಿಲ್ಲಾ ರಚನೆ ರಾಜಕೀಯ ಮಹತ್ವದ ತಿರುವು ಪಡೆದುಕೊಂಡಿದ್ದು, ಬಳ್ಳಾರಿಯಲ್ಲಿ ರಾಜಕೀಯದ ಕಾವು ಹೆಚ್ಚಾಗಿದೆ. ಸರ್ಕಾರದ ನಿಲುವು ಬಳ್ಳಾರಿ ಜಿಲ್ಲೆಯನ್ನು ಆಡಳಿತಾತ್ಮಕ ಕಾರಣಕ್ಕಾಗಿ ವಿಭಜಿಸಿ ವಿಜಯನಗರ ಜಿಲ್ಲೆ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. … Continue reading ವಿಜಯನಗರ ಜಿಲ್ಲಾ ರಚನೆ ಯಾರಿಗೆ ಲಾಭ- ನಷ್ಟ : ಮುಂದುವರಿದಿದೆ ರಾಜಕೀಯ ಲೆಕ್ಕಾಚಾರ