ನೀರು ಕೇಳಿದರೆ ಮೂತ್ರ ಕುಡಿಸಿದ ಆರೋಪ ಹೊತ್ತ ಎಸ್​ಐ ಸಸ್ಪೆಂಡ್​

ಬೆಂಗಳೂರು: ಎಫ್​ಐಆರ್​ ದಾಖಲಿಸದೆ ಯುವಕನೊಬ್ಬನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಲ್ಲದೆ, ಮೂತ್ರ ಕುಡಿಸಿದ್ದರೆಂದು ಆರೋಪಿಸಲಾಗಿದ್ದ ನಗರದ ಬ್ಯಾಟರಾಯನಪುರ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಕೆ.ಎನ್​.ಹರೀಶ್​​ರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ಪಾದರಾಯನಪುರ ನಿವಾಸಿ ತೌಸೀಫ್​ ಪಾಷಾ ಎಂಬ ಯುವಕನನ್ನು ಡಿಸೆಂಬರ್​ 2 ರ ಮಧ್ಯರಾತ್ರಿ 1 ಗಂಟೆಗೆ ಠಾಣೆಗೆ ಕರೆದೊಯ್ದ ಹರೀಶ್,​ ಚಿತ್ರಹಿಂಸೆ ನೀಡಿದ್ದರು. ಎಫ್​ಐಆರ್​ ದಾಖಲಿಸದೆ ಮನಸೋಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್​ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ … Continue reading ನೀರು ಕೇಳಿದರೆ ಮೂತ್ರ ಕುಡಿಸಿದ ಆರೋಪ ಹೊತ್ತ ಎಸ್​ಐ ಸಸ್ಪೆಂಡ್​