ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಹಿಳೆ; ಅಪಾಯವನ್ನು ಅಂದಾಜಿಸಿ ಧಾವಿಸಿ ರಕ್ಷಿಸಿದ ಪೊಲೀಸ್

ಬಳ್ಳಾರಿ: ಅಪಾಯವನ್ನು ಅಂದಾಜಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಧಾವಿಸಿದ್ದರಿಂದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಳ್ಳಾರಿ ರೈಲು ನಿಲ್ದಾಣದಲ್ಲಿ ಇಂಥದ್ದೊಂದು ಪ್ರಕರಣ ಇಂದು ಬೆಳಗ್ಗೆ ನಡೆದಿದೆ. ಗದಗಕ್ಕೆ ತೆರಳಬೇಕಿದ್ದ ಹರಿಪ್ರಿಯಾ ಎನ್ನುವ ಮಹಿಳೆಯೊಬ್ಬರು ಎಕ್ಸ್​ಪ್ರೆಸ್ ಟ್ರೈನ್​ ಚಲಿಸುತ್ತಿದ್ದಾಗಲೇ ಹತ್ತಲು ಯತ್ನಿಸಿ ಎಡವಟ್ಟು ಮಾಡಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಧಾವಿಸಿ ರಕ್ಷಿಸದೇ ಇದ್ದಿದ್ದರೆ ಪ್ರಾಣಾಪಾಯಕ್ಕೆ ಒಳಗಾಗಿರುತ್ತಿದ್ದರು. ಮಹಿಳೆ ಚಲಿಸುವ ರೈಲು ಹತ್ತಲು ತೆರಳುತ್ತಿದ್ದುದನ್ನು ದೂರದಿಂದಲೇ ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಮಾರುತಿ ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು. ಅವರು ಊಹಿಸಿದ್ದಂತೆ ಆಕೆ ರೈಲನ್ನು … Continue reading ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಹಿಳೆ; ಅಪಾಯವನ್ನು ಅಂದಾಜಿಸಿ ಧಾವಿಸಿ ರಕ್ಷಿಸಿದ ಪೊಲೀಸ್