ಬಸವಪ್ಪನ ಆಶೀರ್ವಾದ ಪಡೆದ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್

ಕೆ.ಎಂ.ದೊಡ್ಡಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶನಿವಾರ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಅವರು, ಶ್ರೀ ಕಾಲಭೈರವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಪ್ರಸಿದ್ಧ ಬಸವಪ್ಪನಿಂದ ಆಶೀರ್ವಾದ ಪಡೆದರು. ದೇವಾಲಯದ ಕಾರ್ಯದರ್ಶಿ ಯಜಮಾನ್ ಶಿವಲಿಂಗೇಗೌಡ ಅವರಿಂದ ದೇವಾಲಯದ ಕುರಿತು ಮಾಹಿತಿ ಪಡೆದ ಅವರು, ದೇವಾಲಯದ ಬಸವನ ಪವಾಡಗಳ ಬಗ್ಗೆ ಆಶ್ಚರ್ಯವ್ಯಕ್ತಪಡಿಸಿದರು. ದೇವಾಲಯದ ವಾಸ್ತುಶಿಲ್ಪದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಸಹಾಯಕ … Continue reading ಬಸವಪ್ಪನ ಆಶೀರ್ವಾದ ಪಡೆದ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್