ಪ್ರಶ್ನಿಸಿ ಸಾರ್ಥಕತೆ ಕಂಡುಕೊಳ್ಳುವ ಕಾವ್ಯ

blank

ಸಾಗರ: ಕಾವ್ಯವು ಭಾಷೆ, ಭಾವ, ಅರ್ಥ, ಲಯದಿಂದ ಓದುಗರನ್ನು ತಲುಪಿದರೂ ಪ್ರಶ್ನೆ ಕೇಳುವುದರ ಮೂಲಕವೇ ತನ್ನ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ಸಾಗರ ಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಥೆ ಆಯೋಜಿಸಿರುವ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದಲ್ಲಿ ಪಠ್ಯಗಳ ಓದಿನ ಕುರಿತ ಜಿಜ್ಞಾಸೆ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ಉತ್ತಮ ಕಾವ್ಯವು ಅಭಿಪ್ರಾಯ ರೂಪಿಸುತ್ತದೆಯೇ ಹೊರತು ತನ್ನ ಅಭಿಪ್ರಾಯ ಹೇರುವುದಿಲ್ಲ. ಕವಿ ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಕೂಡ ಕಾವ್ಯದ ಮೂಲಕ ಕಂಡುಕೊಳ್ಳುತ್ತಾನೆ ಎಂದು ತಿಳಿಸಿದರು.

ಆಯಾ ಕಾಲಘಟ್ಟಗಳಲ್ಲಿ ಕಾವ್ಯಗಳು ಸಾಮಾಜಿಕ ಸ್ಥಿತ್ಯಂತರಗಳಿಗೆ ಧ್ವನಿಸುತ್ತಾ ಮುಖಾಮುಖಿಯಾಗಿವೆ. ಕೆಲ ಸಂದರ್ಭಗಳಲ್ಲಿ ನೇರವಾಗಿ ಪ್ರತಿಭಟನೆಗೆ ಇಳಿಯದಿದ್ದರೂ ಒಳಗೆನಿಂದಲೇ ಬಂಡಾಯದ ಧ್ವನಿಯನ್ನು ಕಾವ್ಯಗಳ ಮೂಲಕ ಎತ್ತಿ ಹಿಡಿಯಲಾಗಿದೆ ಎಂದರು.

ಬರಹಗಾರ ಕಮಲಾಕಾರ ಭಟ್ ಕಡವೆ ಮಾತನಾಡಿ, ಕೆಲ ಕವಿತೆಗಳನ್ನು ವಾಚಿಸುವ ಮೂಲಕ ಶಬ್ಧದ ಹಂಗು ತೊರೆದು ಕಾವ್ಯ ಹೇಗೆ ಪರಿಣಾಮಕಾರಿಯಾಗಿ ವಿಚಾರಗಳನ್ನು ದಾಟಿಸುತ್ತದೆ ಎಂಬುದು ಅರಿವಾಗುತ್ತದೆ. ಹಾಡಿನ ಹಂಗಿಲ್ಲದ ಕವನಗಳು ಪರಿಣಾಮಕಾರಿಯಾಗಿ ಜನತೆಯನ್ನು ತಲುಪುತ್ತವೆ ಎಂದರು. ರಂಗಕರ್ಮಿ ಕೆ.ವಿ.ಅಕ್ಷರ ನಿರ್ವಹಿಸಿದರು. ನೀನಾಸಂ ಬಳಗದಿಂದ ನಟರಾಜ ಹೊನ್ನವಳ್ಳಿ ನಿರ್ದೇಶನದ ಹಬ್ಬದ ಹನ್ನೆರಡನೆಯ ರಾತ್ರಿ ನಾಟಕ ಪ್ರದರ್ಶನಗೊಂಡಿತು.

Share This Article

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…

ಈ 3 ರಾಶಿಯಲ್ಲಿ ಜನಿಸಿದವರನ್ನು ಶಾಂತಿಯ ಪ್ರತಿರೂಪ ಎಂದು ಹೇಳಲಾಗುತ್ತೆ! ನೀವು ಯಾವ ರಾಶಿಯವರು? Zodiac Signs

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ…

Summer Tips: ಬೇಸಿಗೆಯಲ್ಲಿ ಕೆಟ್ಟ ಬೆವರು ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Summer Tips: ಬೇಸಿಗೆಯಲ್ಲಿ ಬೆವರು ವಾಸನೆಯನ್ನು ತಪ್ಪಿಸಲು, ನೀವು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ…