ಮಕ್ಕಳ ಬಿಸಿ ಊಟಕ್ಕೆ ಲಂಚ; ಅಧಿಕಾರಿಗಳ ಬಂಧನ

blank

ಬೆಳಗಾವಿ:ಶಾಲಾ ಮಕ್ಕಳ ಮದ್ಯಾಹ್ನ ಬಿಸಿಯೂಟ ಯೋಜನೆಯ ಅಡಿ‌ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ನಿರ್ದೇಶಕರು ಮತ್ತು ವಿಷಯ ನಿರ್ವಾಹಕರು ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ನಡೆಸಿ ಬಂಧಿಸಿದ್ದಾರೆ.
ಮಕ್ಕಳ‌ಮಧ್ಯಾಹ್ನ ಬಿಸಿ ಊಟ ಯೋಜನೆ ಸಹಾಯಕ‌ ನಿರ್ದೆಶಕ ಚಂದ್ರಶೇಖರ ಪೋಳ, ಸುಭಾಷ್ ವಲ್ಲ್ಯಾಪುರ‌ ಲೋಕಾಯುಕ್ತರು ದಾಳಿಗೆ ಒಳಗಾದವರು.

ಘಟನೆ‌ವಿವರ: ಶಾಲಾ ಮಕ್ಕಳ ಮದ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗಳ ಮುಖ್ಯೋಪಾಧ್ಯಯರುಗಳ ಹೆಸರಿನಲ್ಲಿ ಬಿಡುಗಡೆ ಮಾಡುವ ಪ್ರತಿ ತಿಂಗಳದ ಅನುದಾನಕ್ಕೆ ಪ್ರತಿಯಾಗಿ ಸದರಿ ಮುಖ್ಯೋಪಾದ್ಯಯರಿಂದ ತಿಂಗಳ ಮಂತ್ರಿ ಲೆಕ್ಕದಲ್ಲಿ ಹಣವನ್ನು ಸಂಗ್ರಹಿಸಿಕೊಡುವಂತೆ ಒತ್ತಾಯಿಸುತ್ತಿದ್ದನು.ಆ ರೀತಿ ಲಂಚದ ಹಣ ಸಂಗ್ರಹಿಸಿ ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದರಿಂದ ಡಾಟಾ ಎಂಟ್ರಿ ಆಫರೇಟರ್ ರಾಜು ನಾಯಕ ಇವರನ್ನು ಕೆಲಸದಿಂದ ತೆಗೆದುಹಾಕುತ್ತೇವೆ ಅಂತಾ ಬೆದರಿಸಿ ಜಿಪಂ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆ ರಾಜು ನಾಯಕ ಅವರು‌ ಮೇಲಾಧಿಕಾರಿಗಳು ಲಂಚದ ಹಣ ಸಂಗ್ರಹಿಸಿಕೊಡುವಂತೆ ಬೇಡಿಕೆ ಇಟ್ಟಿರುವ ಧ್ವನಿಮುದ್ರಣ‌ಮಾಡಿ ಮಾ.೨೭ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರಿ‌ನ ಆಧಾರದ ಮೇಲೆ ಲೋಕಾಯುಕ್ತ ಪಿಐ ನಿರಂಜನ ಪಾಟೀಲ‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಲಂಚದ ಸಮೇತ ಅಧಿಕಾರಿಗಳಿಬ್ಬರನ್ನು ಬಂಧಿಸಿದ್ದಾರೆ ಎಂದು ಲೋಕಾಯುಕ್ತ ಎಸ್ ಪಿ ಹನಮಂತರಾಯ ತಿಳಿಸಿದ್ದಾರೆ.

blank
Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…