ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ, ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆಗೀಡಾಗಿ ಸುಮಾರು ಎರಡೇ ವಾರಗಳಲ್ಲಿ ಆತ ಸಾಕಿದ್ದ ನಾಯಿ ಸಾವು ಕಂಡಿದೆ.
ಪ್ರವೀಣ್ ನೆಟ್ಟಾರ್ ಪ್ರೀತಿಯಿಂದ ಸಾಕಿದ್ದ ಈ ಶ್ವಾನ, ಕಳೆದ ಮೂರು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಸಾವಿಗೀಡಾಗಿದೆ. ಪ್ರವೀಣ್ ನೆಟ್ಟಾರ್ ಎಂಟು ತಿಂಗಳ ಹಿಂದೆ ಈ ಶ್ವಾನವನ್ನು ಮನೆಗೆ ತಂದಿದ್ದರು.
ಪ್ರಾಣಿಗಳ ಬಗ್ಗೆ, ಅದರಲ್ಲೂ ನಾಯಿಗಳ ಕುರಿತು ಹೆಚ್ಚಿನ ಪ್ರೀತಿ ಹೊಂದಿದ್ದ ಪ್ರವೀಣ್ ನೆಟ್ಟಾರ್, ಕೆಲವು ದಿನಗಳ ಹಿಂದೆ ಮೂರು ನಾಯಿಮರಿಗಳ ರಕ್ಷಣೆ ಕೂಡ ಮಾಡಿದ್ದರು. ಮಳೆಯಲ್ಲಿ ಅನಾಥವಾಗಿದ್ದ, ಆ ಮರಿಗಳನ್ನು ರಕ್ಷಿಸಿ, ಸ್ನೇಹಿತನ ಮನೆಯಲ್ಲಿ ಆಸರೆ ಒದಗಿಸಿದ್ದರು. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?
ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಿಎಂ ರಾಜಕೀಯ ಕಾರ್ಯದರ್ಶಿ ಹೇಳಿದ್ದೇನು?