More

    ಗೌಳಿಯ ಜತೆಗೆ ಪಾವನಾ: ಬಿಡುಗಡೆಗೆ ಎಂಟು, ಹೊಸದಾಗಿ ಇನ್ನೊಂದು..

    ಬೆಂಗಳೂರು: ಶ್ರೀನಗರ ಕಿಟ್ಟಿ, ‘ಗೌಳಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆಯೇ ಬಂದಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಸಹ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಆಗಸ್ಟ್​ನಿಂದ ಪ್ರಾರಂಭವಾಗಲಿದೆ. ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನು ಕೆಲವೇ ದಿನಗಳಿರುವ ಹೊತ್ತಲ್ಲೇ ಪಾವನಾ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ‘ಚಿತ್ರದಲ್ಲಿ ಕಿಟ್ಟಿ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಆಗಸ್ಟ್ ಮೂರನೇ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರೀಕರಣ ಪೂರ್ತಿಯಾಗಿ ಹೊರಾಂಗಣದಲ್ಲೇ ನಡೆಯಲಿದೆ. ಇದೊಂದು ಗ್ರಾಮೀಣ ಚಿತ್ರ ಎನ್ನುವುದಕ್ಕಿಂತ ರಸ್ಟಿಕ್ ಆದ ಚಿತ್ರ ಎನ್ನುವುದು ಸರಿ. ಇದರಲ್ಲಿ ನನಗೆ ಒಳ್ಳೆಯ ಪಾತ್ರವಿದೆ’ ಎನ್ನುತ್ತಾರೆ ಪಾವನಾ. ಎರಡನೇ ಲಾಕ್​ಡೌನ್ ಮುಗಿದ ಮೇಲೆ ಅವರು ನಾಲ್ಕು ಕಥೆಗಳನ್ನು ಕೇಳಿದರಂತೆ. ಆ ಪೈಕಿ ಈ ಕಥೆ ಇಷ್ಟವಾಗಿ ಒಪ್ಪಿಕೊಂಡರಂತೆ. ‘ಮುಂಚೆಗೆ ಹೋಲಿಸಿದರೆ ಒಳ್ಳೆಯ ಪಾತ್ರಗಳೇ ಸಿಗುತ್ತಿವೆ. ಆದರೆ, ಕೇಳಿದ ಕಥೆಗಳ ಪೈಕಿ ಇದು ಬಹಳಷ್ಟು ಇಷ್ಟವಾಯಿತು. ಈ ಪಾತ್ರದಲ್ಲಿ ಅಭಿನಯಕ್ಕೆ ಹೆಚ್ಚು ಸ್ಕೋಪ್ ಇದೆ. ಪ್ರತಿ ಪಾತ್ರಕ್ಕೂ ಆತ್ಮ ಇರಬೇಕು ಎಂದು ಬಯಸುವವಳು ನಾನು. ಅಂಥದ್ದೊಂದು ಆತ್ಮ ಈ ಪಾತ್ರದಲ್ಲಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ.

    ಅಂದಹಾಗೆ, ‘ಗೌಳಿ’ ಚಿತ್ರವನ್ನು ಸೂರ ನಿರ್ದೇಶಿಸುತ್ತಿದ್ದು, ರಘು ಸಿಂಗಂ ನಿರ್ವಿುಸುತ್ತಿದ್ದಾರೆ. ಇದೂ ಸೇರಿದರೆ ಪಾವನಾ ಕೈಯಲ್ಲಿರುವ ಚಿತ್ರಗಳ ಸಂಖ್ಯೆ ಒಂಬತ್ತಾಗುತ್ತದೆ. ಈಗಾಗಲೇ ಅವರು ‘ತೂತು ಮಡಿಕೆ’, ‘ರುದ್ರಿ’, ‘ಕಲಿವೀರ’, ‘ಮೈಸೂರು ಡೈರೀಸ್’, ‘ಕನ್ನಡಿಗ’, ‘ಸದ್ದು’, ‘ಫೈಟರ್’ ಮತ್ತು ‘ಮೆಹಬೂಬ’ ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ‘ಫೈಟರ್’ ಮತ್ತು ‘ಮೆಹಬೂಬ’ ಚಿತ್ರಗಳ ಹಾಡುಗಳ ಚಿತ್ರೀಕರಣ ಬಾಕಿ ಇರುವುದು ಬಿಟ್ಟರೆ, ಮಿಕ್ಕೆಲ್ಲ ಚಿತ್ರಗಳು ಬಿಡುಗಡೆಗೆ ಸಿದವಾಗಿವೆಯಂತೆ.

    ತಾತ ಸಿಎಂ ಆಗಿದ್ದರು, ಈಗ ತಂದೆಯೂ ಸಿಎಂ; ಮೊಮ್ಮಗ ಕೂಡ ರಾಜಕೀಯಕ್ಕೆ ಬರ್ತಾರಾ?

    ಅಪ್ಪ-ಮಗ ಮುಖ್ಯಮಂತ್ರಿಯಾದ ರಾಜ್ಯದ ಎರಡನೇ ಕುಟುಂಬ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts