ದೇವರಮರಿಕುಂಟೆಯಲ್ಲಿ ಗುಗ್ಗರಿ ಹಬ್ಬ

blank

ಪರಶುರಾಮಪುರ: ಸಮೀಪದ ದೇವರಮರಿಕುಂಟೆ ಗ್ರಾಮದಲ್ಲಿ ಮೂರು ದಿನಗಳಿಂದ ಅಹೋಬಲ ಸರಸಿಂಹಸ್ವಾಮಿ ದೇವರ ಗುಗ್ಗರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶುಕ್ರವಾರ ಅಹೋಬಲ ನರಸಿಂಹಸ್ವಾಮಿ ಸಮೂಹದ ದೇವರ ಮೂರ್ತಿಗಳನ್ನು ಸನಿಹದ ವೇದಾವತಿ ನದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಗುಡಿಕಟ್ಟೆಯ ಭಕ್ತರು, ಗ್ರಾಮಸ್ಥರು, ಹನ್ನೆರೆಡು ಕೈವಾಡಸ್ತರು ಗಂಗಾಪೂಜೆ ನೆರವೇರಿಸಿದರು.

ಸೋಮನ ಮೂರ್ತಿಗಳಿಗೆ ಎಡೆ ಅರ್ಪಿಸಿ ಮಣೇವು ಪೂಜೆ ಮಾಡಿದರು. ನೆರೆದಿದ್ದ ಭಕ್ತರಿಗೂ ಗಂಗಾಪೂಜೆಯ ನಂತರ ತೀರ್ಥ-ಪ್ರಸಾದವನ್ನು ನೀಡಿದರು.

ದೇವರ ದಾಸಯ್ಯನವರು ತೆಂಗಿನಕಾಯಿ, ತಂಬಿಟ್ಟು, ಬಾಳೆಹಣ್ಣು, ತುಪ್ಪ, ಸಕ್ಕರೆಯನ್ನು ಕರೀಕಂಬಳಿಯ ಮೇಲಿಟ್ಟು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

ಹರಕೆ ಹೊತ್ತ ಭಕ್ತರು ದಾಸಯ್ಯನವರ ಗರುಡಗಂಬದ ಬಳಿ ಬೆಲ್ಲದ ರಾಶಿಯನ್ನು ಹಾಕಿ ಪೂಜಿಸಿದರು. ಬಳಿಕ ಭಕ್ತರು ಕಾಣಿಕೆ ಹಣವನ್ನು ಹಾಕಿ ನಮಿಸಿದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…