ಪರಶುರಾಮಪುರ: ಕೃಷಿ ತಜ್ಞರ ಸಲಹೆ ಪಡೆದು ಇಲ್ಲಿನ ವೇದಾವತಿ ನದಿ ಪಕ್ಕದ 12 ಎಕರೆ ಜಮೀನಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದ ರೈತ ದಂಪತಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.
ಕೋಟೀಶ್ವರರಾವ್-ಪದ್ಮಾವತಿ ದಂಪತಿ ತಮ್ಮ ಎರೆ ಜಮೀನಿನಲ್ಲಿ ಹೈಬ್ರಿಡ್ ತಳಿಯ ಒಂಬತ್ತು ಕೆಜಿ ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಒಂದರಿಂದ ಮತ್ತೊಂದು ಬೀಜಕ್ಕೆ ಎರಡು ಅಡಿ, ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಐದು ಅಡಿ ಅಂತರ ಕಾಪಾಡಿದ್ದು, ಗಿಡಗಳು ಸಮೃದ್ಧವಾಗಿ ಬೆಳೆದಿವೆ.
450 ಗ್ರಾಂನ ಒಂದು ಪಾಕೆಟ್ ಹತ್ತಿ ಬೀಜಕ್ಕೆ 730 ರೂ. ಬೆಲೆಯಿದ್ದು, 22 ಪಾಕೆಟ್ ಖರೀದಿಸಿದ್ದಾರೆ, ಗೊಬ್ಬರ, ಕಾರ್ಮಿಕರ ಕೂಲಿ, ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶಗಳಿಗೆ, ಡ್ರಿಪ್ಸೆಟ್ಗೆ 6 ಲಕ್ಷ ರೂ. ವೆಚ್ಚವಾಗಿದೆ. ಕಪ್ಪುಭೂಮಿಗೆ ಅಗತ್ಯವಾದ ಮೆಗ್ನೀಷಿಯಂ, ಕ್ಯಾಲ್ಸಿಯಂ ಸೇರಿ ವಿವಿಧ ಪೋಷಕಾಂಶ ನೀಡಿ ಸಸಿಗಳ ಪಾಲನೆ ಮಾಡಿದ್ದಾರೆ. ಇದರಿಂದ ಮೊದಲ ಬೀಡಿನಲ್ಲಿ 200 ಕ್ವಿಂಟಾಲ್ ಹತ್ತಿ ಬಂದಿದೆ. ಒಂದು ಕ್ವಿಂಟಾಲ್ಗೆ ಆರು ಸಾವಿರ ಬೆಲೆಯಿದ್ದು, ಈಗಾಗಲೇ 12 ಲಕ್ಷ ರೂ. ಆದಾಯ ಬಂದಿದೆ ಎನ್ನುತ್ತಾರೆ ರೈತ ದಂಪತಿ.
450 ಗ್ರಾಂನ ಒಂದು ಪಾಕೆಟ್ ಹತ್ತಿ ಬೀಜಕ್ಕೆ 730 ರೂ. ಬೆಲೆಯಿದ್ದು, 22 ಪಾಕೆಟ್ ಖರೀದಿಸಿದ್ದಾರೆ, ಗೊಬ್ಬರ, ಕಾರ್ಮಿಕರ ಕೂಲಿ, ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶಗಳಿಗೆ, ಡ್ರಿಪ್ಸೆಟ್ಗೆ 6 ಲಕ್ಷ ರೂ. ವೆಚ್ಚವಾಗಿದೆ. ಕಪ್ಪುಭೂಮಿಗೆ ಅಗತ್ಯವಾದ ಮೆಗ್ನೀಷಿಯಂ, ಕ್ಯಾಲ್ಸಿಯಂ ಸೇರಿ ವಿವಿಧ ಪೋಷಕಾಂಶ ನೀಡಿ ಸಸಿಗಳ ಪಾಲನೆ ಮಾಡಿದ್ದಾರೆ. ಇದರಿಂದ ಮೊದಲ ಬೀಡಿನಲ್ಲಿ 200 ಕ್ವಿಂಟಾಲ್ ಹತ್ತಿ ಬಂದಿದೆ. ಒಂದು ಕ್ವಿಂಟಾಲ್ಗೆ ಆರು ಸಾವಿರ ಬೆಲೆಯಿದ್ದು, ಈಗಾಗಲೇ 12 ಲಕ್ಷ ರೂ. ಆದಾಯ ಬಂದಿದೆ ಎನ್ನುತ್ತಾರೆ ರೈತ ದಂಪತಿ.
ಪರಶುರಾಮಪುರ ದ ರೈತ ದಂಪತಿ ಹತ್ತಿಯಲ್ಲಿ ಈ ಬಾರಿ ಉತ್ತಮ ಲಾಭ ಕಂಡಿದ್ದಾರೆ. ತಾಲೂಕಿನ ಬಹುತೇಕ ಕಡೆ ಹತ್ತಿ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.
ಡಾ.ಮೋಹನ ಕುಮಾರ
ಕೃಷಿ ಸಹಾಯಕ ನಿರ್ದೇಶಕ, ಚಳ್ಳಕೆರೆ
ಕೃಷಿ ತಜ್ಞರ ಸಲಹೆ ಪಡೆದು ಬೀಜ ಬಿತ್ತನೆ ಮಾಡಿದ್ದು, ನಮ್ಮ ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಈಗ ಮತ್ತೆ 12 ರಿಂದ 15 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಹತ್ತಿಗೆ ಕಪ್ಪುಭೂಮಿ ಉತ್ತಮವಾಗಿದ್ದು, ರೋಗ ಬಾಧೆ ಕಾಣಿಸಿಕೊಂಡಿಲ್ಲ.
ಕೋಟೀಶ್ವರರಾವ್ ರೈತ