ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ

blank

ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ
ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರಕಲೆಯು ಅನೇಕ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆಯಾಗಿದೆ. ವಚನಕಾರರನ್ನು, ಹಿಂದಿನ ಕಾಲದ ವೈಭವವನ್ನು ಚಿತ್ರಕಲೆ ಮೂಲಕ ತೋರಿಸುವ ಈ ಶಿಕ್ಷಕರ ಪ್ರಯತ್ನ ಮೆಚ್ಚುವಂತಹದ್ದು ಎಂದು ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಸುರೇಶ ಹಾಲಬಾವಿ ಮಾತನಾಡಿ, ಧಾರವಾಡವು ಇಡೀ ಉತ್ತರ ಕರ್ನಾಟಕವನ್ನು ತನ್ನತ್ತ ಸೆಳೆಯುವಂತೆ ಮಾಡಿದ ಕಲಾವಿದ ಡಿ.ವಿ.ಹಾಲಬಾವಿ. ಅಂತಹ ಮಹಾನ್​ ಕಲಾವಿದರ ತವರೂರಲ್ಲಿ ಚಿತ್ರಕಲಾ ಶಿಕ್ಷಕರು ಅನೇಕ ಚಿತ್ರಗಳನ್ನು ಪ್ರದರ್ಶಿಸಿ ಸಮಾಜದ ಗಮನ ಸೆಳೆಯುತ್ತಿರುವುದು ವಿಶೇಷ ಎಂದರು.
ಬಿ.ವೈ. ಭಜಂತ್ರಿ, ಪಿ.ಆರ್​. ಬಾರಕೇರ ಮಾತನಾಡಿದರು. ಬಿ.ಎಸ್​. ತೋಟಗಿ ಅಧ್ಯಕ್ಷತೆ ವಹಿಸಿದ್ದರು. ಸಂಜು ಬಸ್ತವಾಡ, ಯಲ್ಲಪ್ಪ ಹುಬ್ಬಳ್ಳಿ, ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಬಿ.ಎಚ್​. ಕುರಿಯವರ, ಬಸವಂತ ತೋಟದ, ಶಿಕ್ಷಕರಾದ ಆರ್​.ಬಿ. ಹಳ್ಳುರ, ಎಸ್​.ಎಚ್​. ಪಾಟೀಲ, ಗಾಮನಗಟ್ಟಿ, ಇತರರು ಇದ್ದರು.
ಬಂಡಿವಡ್ಡರ ಸ್ವಾಗತಿಸಿದರು. ಬಿ.ಪಿ. ಪಾಟೀಲ ನಿರೂಪಿಸಿದರು. ಮಂಜು ಹೂಗಾರ ವಂದಿಸಿದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…