ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

ಚಿಕ್ಕಬಳ್ಳಾಪುರ: ಕೋವಿಡ್​-19 ಸೋಂಕಿನಿಂದ ಸಾವಿಗೀಡಾದವರ ಪಾರ್ಥಿವ ಶರೀರ ಮನೆಯವರಿಗೇ ನೋಡಲು ಸಿಗದ ಪರಿಸ್ಥಿತಿ ಒಂದೆಡೆಯಾದರೆ, ಸಿಕ್ಕರೂ ನೋಡಲು ಸಂಬಂಧಿಕರು-ಆಪ್ತರೂ ಬಂದು ನೋಡಲಾಗದ ಪರಿಸ್ಥಿತಿ ಮತ್ತೊಂದೆಡೆ. ಇಂಥ ಸಂದರ್ಭದಲ್ಲಿ ಕಳ್ಳರು ಕೋವಿಡ್​-19 ಸೋಂಕಿತರು ಎಂಬುದನ್ನೂ ಲೆಕ್ಕಿಸದೆ ಕರೊನಾದಿಂದಾಗಿ ಮೃತಪಟ್ಟವರ ಶವಗಳ ಮೇಲಿನ ಚಿನ್ನಾಭರಣಗಳನ್ನು ಕೂಡ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇಂಥ ಕಳ್ಳರ ಕಾಟ ಹೆಚ್ಚಾಗಿದ್ದು, ಇಂದು ಕೂಡ ಮತ್ತೊಂದು ಇಂಥದ್ದೇ ಕಳವು ಪ್ರಕರಣ ವರದಿಯಾಗಿದೆ. ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ, ಚಿಕ್ಕಬಳ್ಳಾಪುರದ ನಿವಾಸಿ, ನಿವೃತ್ತ … Continue reading ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!