ಶಿಕಾರಿಪುರ: ನಾವು ಮೆರವಣಿಗೆಗಿಂತ ಬರವಣಿಗೆ ಕಡೆಗೆ ಹೆಚ್ಚಿನ ಗಮನಕೊಡಬೇಕು. ದೇವಾಲಯಗಳ ಜತೆಗೆ ಗ್ರಂಥಾಲಯಗಳ ಕಡೆಗೆ ಹೆಚ್ಚು ಸಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆದಿಜಾಂಬವ ಸಮಾಜ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಆಶಯದಂತೆ ನಾವು ಮೊದಲು ಸುಶಿಕ್ಷಿತ ರಾಗಬೇಕು. ಶಿಕ್ಷಣ ನಮ್ಮನ್ನು ಎತ್ತರಕ್ಕೇರಿಸುತ್ತದೆ. ನಮ್ಮ ಬದುಕಲ್ಲಿ ಹೊಸ ಬೆಳಕನ್ನು ಮೂಡಿಸುತ್ತದೆ ಎಂದರು.
ಶೋಷಿತರು ಪ್ರತಿ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಎಂದರೆ ಅದು ಸಂವಿಧಾನ ನೀಡಿದ ಲ. ಇವತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುತ್ತಿದ್ದಾರೆ. ನಮ್ಮ ಶಾಲೆಗಳ ಗಂಟೆ ಶಬ್ದದಿಂದ ಮಕ್ಕಳ ಬದುಕು ಹಸನಾಗುತ್ತಿದೆ. ಯಾವ ಕಾರಣಕ್ಕೂ ಮಕ್ಕಳು ಶಾಲೆ ತಪ್ಪಿಸದಂತೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನನಗೆ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಇಲಾಖೆ ಖಾತೆ ನೀಡಿದ್ದು ಸಂತಸ ತಂದಿದೆ. ಪಂಚ ಗ್ಯಾರಂಟಿಗಳು ಇವತ್ತು ಎಲ್ಲ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಕಲ್ಪಿಸಿವೆ. ಇವತ್ತು ಈ ಯೋಜನೆಯಿಂದ ಲಾನುಭವಿಗಳಾದವರು ಸಿದ್ದರಾಮಯ್ಯ ಅವರ ಸಾಮಾಜಿಕ ಕಳಕಳಿಯನ್ನು ಮೆಚ್ಚುತ್ತಾರೆ ಎಂದು ಹೇಳಿದರು.
ಸಂಘಟನೆಗಳು ಯಾವತ್ತೂ ಬಲವಗುತ್ತ ಹೋಗಬೇಕು. ಸಂಘಟಿತ ಪ್ರಯತ್ನದಿಂದ ಸಂಘಟನೆಗಳಿಗೆ ಶಕ್ತಿ ಬರುತ್ತದೆ. ಸೊರಬ ತಾಲೂಕಿನಲ್ಲಿ ಈಗಾಗಲೇ ಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತಹ ಪ್ರಕ್ರಿಯೆ ಬಹುತೇಕ ಮುಗಿದಂತಾಗಿದೆ. ಶಿಕಾರಿಪುರ ತಾಲೂಕಿನಲ್ಲಿ ಇನ್ನೂ ಬಾಕಿಯಿದೆ. ಉಸ್ತುವಾರಿ ಸಚಿವನಾಗಿ ಹಕ್ಕುಪತ್ರವನ್ನು ಲಾನುಭವಿಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಂವಿಧಾನ ಇವತ್ತು ನಮ್ಮೆಲ್ಲರಿಗೂ ಅತ್ಯಂತ ಗೌರವಯುತ, ಪವಿತ್ರವಾದ ಗ್ರಂಥ. ನಾವು ಸಂವಿಧಾನವನ್ನು ಹೊರತುಪಡಿಸಿ ಏನನ್ನೂ ಹೇಳಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳ ಜನತೆಯ ಸಾಕ್ಷರತೆಯ ಕಡೆಗೆ ಹೆಚ್ಚಿನ ಗಮನಹರಿಸಿದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರು ಶೋಷಿತರ ಏಳಿಗೆಗಾಗಿ ಶ್ರಮಿಸಿದ ಮಹಾನಾಯಕ ಎಂದು ಬಣ್ಣಿಸಿದರು.
ಮಾಯಕೊಂಡ ಶಾಸಕ ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಆದಿಜಾಂಬವ ಸಮಾಜದ ಗೌರವಾಧ್ಯಕ್ಷ ಗಾಮದ ಹೊಳಿಯಪ್ಪ, ಸಮಾಜದ ಅಧ್ಯಕ್ಷ ನಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಮ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ, ಭಂಡಾರಿ ಮಾಲತೇಶ್, ಉಳ್ಳಿ ದರ್ಶನ್, ಶ್ರೀನಿವಾಸ್ ಕರಿಯಣ್ಣ, ಜಗದೀಶ್, ಬಸವರಾಜ್, ಮಂಜುನಾಥ್, ಪುಷ್ಪಾ ಶಿವಕುಮಾರ್ ಇತರರಿದ್ದರು.
