ಆರಕ್ಷಕರ ಬಳಕೆ ಸಲ್ಲ

blank

ಹುಕ್ಕೇರಿ: ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಪಂಚಮಸಾಲಿ ಸಮುದಾಯದವರು, ಸಮುದಾಯದ ವಕೀಲರು ರಸ್ತೆ ಸಂಚಾರ ತಡೆ ನಡೆಸಿ ಗುರುವಾರ ಪ್ರತಿಭಟಿಸಿದರು.

ವಕೀಲ ರಾಮಚಂದ್ರ ಜೋಶಿ, ಎಸ್.ಜಿ.ನದಾಫ್, ರಾಜೇಂದ್ರ ಮೋಶಿ ಮಾತನಾಡಿ, ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಸರ್ಕಾರ ಪೊಲೀಸರನ್ನು ಬಳಸಿಕೊಂಡಿದ್ದು ಖಂಡನೀಯ ಎಂದರು.

ಸಮುದಾಯದ ಮುಖಂಡರಾದ ಚಂದ್ರಶೇಖರ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ವಿಜಯ ರವದಿ, ತಮ್ಮಣಗೌಡ ಪಾಟೀಲ ಮಾತನಾಡಿ, ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳು ಮೀಸಲಾತಿ ಬೇಡಿಕೆಗೆ ಸ್ಪಂದಿಸದಿರುವುದು ವಿಷಾದಕರ ಎಂದು ಹೇಳಿದರು.

ಬಳಿಕ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಪಂಚಮಸಾಲಿ ಸಮುದಾಯದ ತಾಲೂಕಾಧ್ಯಕ್ಷ ಭೀಮಪ್ಪ ಚೌಗಲಾ, ಕೆ.ಬಿ.ಕುರಬೇಟ, ಮುಖಂಡರಾದ ಸೋಮಶೇಖರ ಪರಕನಟ್ಟಿ, ಜಯಗೌಡ ಪಾಟೀಲ, ಬಿ.ಎಸ್.ಮುನ್ನೋಳಿ, ರಾಜು ಮುನ್ನೋಳಿ, ಪರಗೌಡ ಪಾಟೀಲ, ವಿರೂಪಾಕ್ಷ ಮರೆನ್ನವರ, ಚನ್ನಪ್ಪ ಗಜಬರ, ಬಸವರಾಜ ನಂದಿಕೋಲಮಠ, ಬಸಗೌಡ ಪಾಟೀಲ, ರವಿ ಪರಕನಟ್ಟಿ, ಭೀಮಪ್ಪ ಮುದಕನ್ನವರ, ಇತರರಿದ್ದರು.

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …