More

    ಪೌರತ್ವ ತಿದ್ದುಪಡಿ ಕಾಯ್ದೆ ಪರ ಪೋಸ್ಟ್​ ಹಾಕಿದ್ದಕ್ಕೆ “ಯಾವುದಾದರೂ ಗುಡ್ಡೆಯಲ್ಲಿ ನಿನ್ನ ಶವ ಪತ್ತೆಯಾಗಬಹುದು” ಎಂದು ವಿದೇಶದಿಂದ ಬೆದರಿಕೆ ಕರೆ!

    ಮಂಗಳೂರು: ಸಿಎಎ, ಎನ್ಆರ್​​ಸಿ ಪರ ಫೇಸ್ಬುಕ್​ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಬಂದಿದೆ.

    ಜೀವ ಬೆದರಿಕೆ ಕರೆ ಬಂದಿರುವುದು ಇಲ್ಲಿನ ಬಿಜೆಪಿ ಕಾರ್ಯಕರ್ತ ಮಹಮ್ಮದ್ ಅಸ್ಗರ್​ ಎಂಬುವವರಿಗೆ. ಮಹಮ್ಮದ್​ ಆಸ್ಗರ್​ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು,

    ಅಸ್ಗರ್​ಗೆ ವಿದೇಶದಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಅಲ್ಲದೆ ವಾಯ್ಸ್ ಮೆಸೇಜ್ ಮೂಲಕವೂ ಬೆದರಿಕೆ ಮಾಡಲಾಗಿದೆ. ಕರೆ ಮಾಡಿ “ದಕ್ಷಿಣಕನ್ನಡದಲ್ಲಿ ನೀನು ಜೀವಂತ ಉಳಿಯಲ್ಲ” ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.

    ಅಲ್ಲದೆ “ನೀನು ಈ ಬಗ್ಗೆ ಲೇಖನ ಬರೆದರೆ, ಯಾವುದಾದರೂ ಗುಡ್ಡೆಯಲ್ಲಿ ನಿನ್ನ ಶವ ಪತ್ತೆಯಾಗಬಹುದು” ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಮ್ಮದ್​ ಅಸ್ಗರ್​ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಕರೆ ಬಂದ ಮೂಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts