ಮಂಗಳೂರು: ಸಿಎಎ, ಎನ್ಆರ್ಸಿ ಪರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಬಂದಿದೆ.
ಜೀವ ಬೆದರಿಕೆ ಕರೆ ಬಂದಿರುವುದು ಇಲ್ಲಿನ ಬಿಜೆಪಿ ಕಾರ್ಯಕರ್ತ ಮಹಮ್ಮದ್ ಅಸ್ಗರ್ ಎಂಬುವವರಿಗೆ. ಮಹಮ್ಮದ್ ಆಸ್ಗರ್ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು,
ಅಸ್ಗರ್ಗೆ ವಿದೇಶದಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಅಲ್ಲದೆ ವಾಯ್ಸ್ ಮೆಸೇಜ್ ಮೂಲಕವೂ ಬೆದರಿಕೆ ಮಾಡಲಾಗಿದೆ. ಕರೆ ಮಾಡಿ “ದಕ್ಷಿಣಕನ್ನಡದಲ್ಲಿ ನೀನು ಜೀವಂತ ಉಳಿಯಲ್ಲ” ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಅಲ್ಲದೆ “ನೀನು ಈ ಬಗ್ಗೆ ಲೇಖನ ಬರೆದರೆ, ಯಾವುದಾದರೂ ಗುಡ್ಡೆಯಲ್ಲಿ ನಿನ್ನ ಶವ ಪತ್ತೆಯಾಗಬಹುದು” ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಮ್ಮದ್ ಅಸ್ಗರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಕರೆ ಬಂದ ಮೂಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.