ನವರಾತ್ರಿ ದುರ್ಗಾ ಪೂಜೆ ಪೆಂಡಾಲ್​ಗಳಿಗೆ ಆಯೋಜಕರಿಗಷ್ಟೇ ಪ್ರವೇಶ; ಹೈಕೋರ್ಟ್ ಆದೇಶ

blank

ಕೋಲ್ಕತ: ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನಡೆಯುವ ಪೆಂಡಾಲ್​ಗಳಿಗೆ ಆಯೋಜಕರಿಗಷ್ಟೇ ಅವಕಾಶ ನೀಡಬೇಕು. ಹೊರಗಿನವರಿಗೆ ಅಲ್ಲಿ ಪ್ರವೇಶ ಕಲ್ಪಿಸಬಾರದು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ.

ಚಿಕ್ಕ ಪೆಂಡಾಲ್​ಗಳಲ್ಲಿ ಜನರಿಗೆ ಐದು ಮೀಟರ್ ಹಾಗೂ ದೊಡ್ಡ ಪೆಂಡಾಲ್​ಗಳಲ್ಲಿ ಹತ್ತು ಮೀಟರ್​ ದೂರದಿಂದಲೇ ದೇವರ ದರ್ಶನ ಪಡೆಯುವಂತೆ ಸೂಚಿಸಬೇಕು. ಮಾತ್ರವಲ್ಲ ಪೂಜೆ ಹಿನ್ನೆಲೆಯಲ್ಲಿ ನಡೆಯುವ ಜನಜಂಗುಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಆಯೋಜಕರು ಮುಂಚಿತವಾಗಿಯೇ ಒಂದು ಬ್ಲೂಪ್ರಿಂಟ್​ ನೀಡಬೇಕು ಎಂದು ಕೋಲ್ಕತದ ಉಚ್ಚ ನ್ಯಾಯಾಲಯ ಆದೇಶಿಸಿದೆ.

ಆಯೋಜಕರಷ್ಟೇ ಪೆಂಡಾಲ್​ಗೆ ಪ್ರವೇಶಿಸಬಹುದಾಗಿದ್ದು, ಅಂಥವರ ಹೆಸರನ್ನು ಪೆಂಡಾಲ್​ ಹೊರಗೆ ನಮೂದಿಸಿರಬೇಕು. ಪೆಂಡಾಲ್​ ಆವರಣದಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ ಇರಲಿದೆ ಎಂಬುದಾಗಿ ಕೋರ್ಟ್ ನಿರ್ದೇಶನ ನೀಡಿದೆ. ಈ ಆದೇಶ ಕೋಲ್ಕತದ 34 ಸಾವಿರ ನೋಂದಾಯಿತ ದುರ್ಗಾ ಪೂಜಾ ಪೆಂಡಾಲ್​ಗಳಿಗೆ ಅನ್ವಯಿಸಲಿದ್ದು, ಈ ವರ್ಷ ಅಲ್ಲಿ ಅಕ್ಟೋಬರ್​ 23ರಿಂದ 26ರವರೆಗೆ ದುರ್ಗಾಪೂಜೆ ನಡೆಯಲಿದೆ. (ಏಜೆನ್ಸೀಸ್​)

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…