Karnataka Bandh: ಕಳೆದ ತಿಂಗಳು ಮಹಾರಾಷ್ಟ್ರ ಮರಾಠಿ ಪುಂಡರು ಕನ್ನಡಿಗರ ಮೇಲೆ ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಇಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದರು. ರಾಜ್ಯ ಬಂದ್ಗೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಮಾತ್ರ ನೀಡಿತ್ತು. ಕರುನಾಡನ್ನು ಸಂಪೂರ್ಣ ಸ್ತಬ್ದಗೊಳಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕು ಎಂದಿದ್ದ ವಾಟಾಳ್ ನಾಗರಾಜ್ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಲಭಿಸಿದೆ.
ರಾಜ್ಯಾದ್ಯಂತ ಬಂದ್ ಕರೆಯಿದ್ದ ಕಾರಣ ಸಾರಿಗೆ ಬಸ್ಗಳು, ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಲಿದೆಯೇ ಎಂಬ ಅನುಮಾನಗಳು ಮೂಡಿತ್ತು. ಆದರೆ, ಇಂದು ಬೆಳಗ್ಗಿನಿಂದಲೇ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಎಂದಿನಂತೆ ರಸ್ತೆಗಿಳಿಯಿತು. ಇದರೊಟ್ಟಿಗೆ ಖಾಸಗಿ ಕಚೇರಿಗಳು, ಹೋಟೆಲ್, ಮಳಿಗೆಗಳು ಕೂಡ ಕಾರ್ಯನಿರ್ವಹಿಸಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಾಜ್ಯ ರಾಜಧಾನಿ ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ದೊರಕಿದೆ. ಈ ಮೂಲಕ ಕರ್ನಾಟಕ ಬಂದ್ಗೆ ಕೇವಲ ನೈತಿಕ ಬೆಂಬಲ ಮಾತ್ರ ಸಿಕ್ಕಿದೆ ಎಂಬುದು ಸ್ಪಷ್ಟ.
ಬಂದ್ಗೆ ಬೆಂಬಲ ಕೊಡದ ರಾಜ್ಯ ಸರ್ಕಾರ ನಡೆ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್ ಮತ್ತು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಟೌನ್ಹಾಲ್ ಮುಂದೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ರೂಪೇಶ್ ರಾಜಣ್ಣ, ಸಾ.ರಾ. ಗೋವಿಂದು ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪತಿ ಹತ್ಯೆಗೈದ ಮರುದಿನವೇ ಪ್ರಿಯಕರನ ಜತೆಗೆ ಜಾಲಿ ಟ್ರಿಪ್! ಹಿಮಾಚಲದಲ್ಲಿ ಮೋಜು-ಮಸ್ತಿ | Murder Case
ಎಲ್ಲೆಲ್ಲಿ ನೀರಸ ಪ್ರತಿಕ್ರಿಯೆ?
- ಕರ್ನಾಟಕ ಬಂದ್ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ.
- ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ
- ರಾಯಚೂರಿನಲ್ಲಿ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ
- ಶಿವಮೊಗ್ಗದಲ್ಲಿಯೂ ಸಿಗದ ಬೆಂಬಲ
- ಮೈಸೂರಿನಲ್ಲಿ ಪ್ರತಿಭಟನೆ ಭುಗಿಲೆದ್ದರೂ ನೈತಿಕ ಬೆಂಬಲದಿಂದ ಬಂದ್ಗೆ ಪೂರ್ಣ ಬೆಂಬಲ ಸಿಕ್ಕಿಲ್ಲ.
ಪತಿ ಹತ್ಯೆಗೈದ ಮರುದಿನವೇ ಪ್ರಿಯಕರನ ಜತೆಗೆ ಜಾಲಿ ಟ್ರಿಪ್! ಹಿಮಾಚಲದಲ್ಲಿ ಮೋಜು-ಮಸ್ತಿ | Murder Case