More

    ಹುಟ್ಟುಹಬ್ಬದ ಖುಷಿಯಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ನಿಖಿಲ್​ ಕುಮಾರಸ್ವಾಮಿ

    ಬೆಂಗಳೂರು: ನಟ ನಿಖಿಲ್​ ಕುಮಾರಸ್ವಾಮಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಅಭಿಮಾನಿಗಳ ಜತೆ ಕೇಕ್ ಕಟ್ ಮಾಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ನಿಖಿಲ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರಿ ಚಿತ್ರರಂಗದ ಸ್ನೇಹಿತರು ಶುಭಕೋರಿದ್ದಾರೆ. ಲೋಕಸಭಾ ಚುನಾವಣೆ ಸೋಲಿನ ಬಳಿಕ ನಿಖಿಲ್​ ಸಿನಿಮಾದಿಂದ ಕೊಂಚ ಬ್ರೇಕ್​ ಪಡೆದುಕೊಂಡಿದ್ದರು. ಸೀತಾರಾಮ ಕಲ್ಯಾಣ ಬಳಿಕ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್​ ನಟಿಸಿದ್ದರು. ಕುರುಕ್ಷೇತ್ರದಲ್ಲಿ ಅಭಿಮನ್ಯು ಎಂಬ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ, ಅಮೋಘ ಅಭಿನಯದ ಮೂಲಕ ಸಿನಿ ರಸಿಕರ ಮನೆಗೆದ್ದಿದ್ದರು. ಈ ಚಿತ್ರದ ಬಳಿಕ ಈವರೆಗೂ ಅವರ ಯಾವುದೇ ಸಿನಿಮಾದ ಸುಳಿವಿರಲಿಲ್ಲ.

    ಇದೀಗ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿಖಿಲ್​ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಭರ್ಜರಿ ಚಿತ್ರಗಳ ಮೂಲಕ ರೀ ಎಂಟ್ರಿ ಕೊಡಲು ನಿಖಿಲ್​ ಸಿದ್ಧರಾಗಿದ್ದಾರೆ.

    ಬರ್ತಡೇ ಪ್ರಯುಕ್ತ ನಿಖಿಲ್ ಅವರ ಮುಂದಿನ 4 ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದೆ. ಮುನಿರತ್ನ ನಿರ್ಮಾಣ ಮಾಡಲಿರುವ ‘ಧನುಷ್’ ಸಿನಿಮಾ, ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳಲಿರುವ ಪ್ರೊಡಕ್ಷನ್ ನಂ-1, ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಲಿರೋ ಪ್ರೊಡಕ್ಷನ್ ನಂ-20 ಹಾಗೂ ಎ.ಪಿ ಅರ್ಜುನ್ ನಿರ್ದೇಶಿಸಲಿರೋ ಪ್ರೊಡಕ್ಷನ್ ನಂ-1 ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ.

    ಎಲ್ಲರಿಗೂ ಶುಭೋದಯ , ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವ ಪ್ರತಿಯೊಬ್ಬರಿಗೂ ನನ್ನ ಕೋಟಿ ಕೋಟಿ ಪ್ರೀತಿಯ ವಂದನೆಗಳು . ಬಹಳಷ್ಟು ಜನ ನನ್ನ ಮುಂದಿನ…

    Nikhil Gowda Jaguar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜನವರಿ 21, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts