| ಬೆಂಕಿ ಬಸಣ್ಣ, ನ್ಯೂಯಾರ್ಕ್
ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಇದೇ ಜುಲೈ 6 ಶನಿವಾರದಂದು ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಭರ್ಜರಿಯಾಗಿ ನಡೆಯಿತು. ಇದನ್ನು ನಾವಿಕ ಸಂಸ್ಥೆಯು ಜರ್ಮನಿಯ ರೈನ್-ಮೈನ್ ಕನ್ನಡ ಸಂಘದ ( RMKS) ಸಹಯೋಗದೊಂದಿಗೆ ಆಯೋಜಿಸಿತ್ತು. ಯೂರೋಪಿನ ವಿವಿಧ ದೇಶಗಳಿಂದ ಮಾತ್ರವಲ್ಲದೇ, ಅಮೇರಿಕಾ ದೇಶದಿಂದಲೇ ಸುಮಾರು 200 ಜನರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಕಳೆದ ಹಲವಾರು ತಿಂಗಳುಗಳಿಂದ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರಿಗೆ, ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರಿಗೆ ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ , ರೈನ್-ಮೈನ್ ಕನ್ನಡ ಸಂಘ ( RMKS) ದ ಅಧ್ಯಕ್ಷರಾದ ವೇದ ಕುಮಾರಸ್ವಾಮಿ, ಸಂಚಾಲಕರಾದ ವಿಶ್ವನಾಥ ಬಾಳೇಕಾಯಿ, ಸಂಯೋಜಕರಾದ ರವೀಂದ್ರ ಕುಲಕರ್ಣಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ಣೂ ಓದಿ: ಅವರೆಲ್ಲಾ ದೊಡ್ಡ ಮಂದಿ, ಯಾರು ಏನೂ ಮಾಡಲ್ಲ; ಅಪಘಾತದಲ್ಲಿ ಪತ್ನಿ ಕಳೆದುಕೊಂಡ ಪತಿ ಕಣ್ಣೀರು
ಜರ್ಮನಿ ಅಂದಾಕ್ಷಣ ಕನ್ನಡಿಗರ ನೆನಪಿಗೆ ಬರುವುದು ಇತಿಹಾಸದಲ್ಲಿಯೇ ಮೊಟ್ಟ ಮೊದಲ “ಕನ್ನಡ – ಇಂಗ್ಲಿಷ್” ಶಬ್ದಕೋಶವನ್ನು ರಚಿಸಿದ ಫೇರ್ಡಿನಂಡ್ ರಿವೆಂರಂಡ್ ಡಾ.ಕಿಟಲ್. ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಿಟಲ್ ಫ್ಯಾಮಿಲಿಯ ನಾಲ್ಕನೇ ಮತ್ತು 5ನೇ ತಲೆಮಾರಿನ (ಮರಿ ಮೊಮ್ಮಕ್ಕಳನ್ನು ) ಸದಸ್ಯರಾದ ಅಲ್ಮುತ್ ಮೆಯೆರ್ ಕಿಟಲ್, ಯುವ್ಸ್ ಪಾಟ್ರಿಕ್ ಮೆಯೆರ್ ಮುಂತಾದವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು.
ಈ ನಾವಿಕೋತ್ಸವ ಸಮ್ಮೇಳನವು ಬೆಳಿಗ್ಗೆ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಪ್ರೊಫೆಸರ್ ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ನಡೆಸಿಕೊಟ್ಟ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ “ಮೈನಾಕ” ವನ್ನು ಬಿಡುಗಡೆ ಮಾಡಲಾಯಿತು.
ಇದನ್ಣೂ ಓದಿ: ಐಕೈತೆಯಿಂದ ಹಬ್ಬವನ್ನು ಆಚರಿಸಿ
ಕನ್ನಡ ಸಾಹಿತ್ಯ ವೇದಿಕೆ:
ಪ್ರೊ. ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನಡೆಯಿತು. ಇದರಲ್ಲಿ “ಯುರೋಪಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಯ ಮತ್ತು ಕುಂದು ಕೊರತೆಗಳಲ್ಲಿ ಜರ್ಮನಿ ಮತ್ತು ಕರ್ನಾಟಕ ಸರ್ಕಾರದ ಸಹಕಾರದ ಅಗತ್ಯತೆ” ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಜೊತೆಗೆ “ಯುರೋಪಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ಪ್ರಾಮುಖ್ಯತೆ” ವಿಷಯ ಮಂಡನೆಯನ್ನು ಏರ್ಪಡಿಸಲಾಗಿತ್ತು. ಈ ಸಾಹಿತ್ಯ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ಕವಿಗೋಷ್ಠಿ ಮತ್ತು ಭಾವಸಾಗರ ಕಾರ್ಯಕ್ರಮಗಳನ್ನು ಮಾಡಲಾಯಿತು. ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ವಯಸ್ಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ನಾವಿಕೋತ್ಸವ ಸಮ್ಮೇಳನದ ಭಾಗವಾಗಿ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ವೈದ್ಯರಾದ ಡಾಕ್ಟರ್ ಬಿ. ವಿ. ಚಂದ್ರಮೌಳಿ, ಡಾಕ್ಟರ್ ರಾಜಣ್ಣ ರಾಮಸ್ವಾಮಿ, ಡಾಕ್ಟರ್ ಸುಬ್ರಮಣ್ಯ ಭಟ್, ಡಾಕ್ಟರ ನವೀನ್ ಉಳಿ, ಮತ್ತು ಡಾಕ್ಟರ್ ಮನಮೋಹನ್ ಕಟ್ಟಪಡಿ ಅವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಕೊಟ್ಟರು.
ಕ್ಯಾಲಿಫೋರ್ನಿಯಾದ “ರಂಗಧ್ವನಿ” ತಂಡ ಪ್ರಸ್ತುತ ಪಡಿಸಿದ ವಲ್ಲೀಶ ಶಾಸ್ತ್ರಿ ನಿರ್ದೇಶನದದ ಸಂದೀಪ್ ಆಚಾರ್ ವಿರಚಿತ ಹಾಸ್ಯ ನಾಟಕ “ಬೇಸ್ತು ಬಿದ್ದ ರಾಜ” ಪ್ರೇಕ್ಷಕ ರನ್ನು ರಂಜಿಸಿತು. ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಮತ್ತು ಅವರ ತಂಡದವರಾದ ಹಿನ್ನೆಲೆ ಗಾಯಕಿ ಹರ್ಷ ರಂಜಿನಿ ಮತ್ತು ಡ್ರಮ್ಮರ್ ಕೃಷ್ಣ ಆನಂದ್, ದೀಪಕ್ ಜಯಶೀಲನ್, ಪ್ರಕಾಶ್ ಅಂಥೋನಿ, ಮತ್ತು ವರುಣ್ ಪ್ರದೀಪ್ ಮುಂತಾದವರು ಪ್ರೇಕ್ಷಕರನ್ನು ಮನಸೂರೆಗೊಂಡರು.
ಇದನ್ಣೂ ಓದಿ: ಜಿಂಬಾಬ್ವೆ ವಿರುದ್ಧದ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ‘ಹಿಟ್ಮ್ಯಾನ್’ ನೆನಪಿಸಿದ ಅಭಿಷೇಕ್ ಶರ್ಮ!
ಈ ಸಮ್ಮೇಳನದಲ್ಲಿ ನಡೆದ ಇತರ ಮುಖ್ಯ ಕಾರ್ಯಕ್ರಮಗಳು ಹೀಗಿವೆ : ನಾವಿಕ ಕಾರ್ಯಕಾರಿಣಿ ಸಮಿತಿಯಿಂದ ಹಚ್ಚೇವು ಕನ್ನಡದ ದೀಪ ನೃತ್ಯ, ಅಮೇರಿಕಾದ ಟೆಕ್ಸಾಸ್ ನ ರಶ್ಮಿ ಶಶಿ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡಾನ್ಸ್ ಅವರಿಂದ ನೃತ್ಯ ಕಾರ್ಯಕ್ರಮ, ಅಮೆರಿಕಾದ ವೀರ ರಘುನಾಥ್, ಕಲ್ಪನಾ ರಾಮಸ್ವಾಮಿ, ಶಂಕರಮೂರ್ತಿ ಮತ್ತು ಗಂಗಾ ಅವರಿಂದ ಗಾನಸುದೆ ಕಾರ್ಯಕ್ರಮ. ಜರ್ಮನಿಯಲ್ಲಿರುವ ಯಕ್ಷಮಿತ್ರರು ತಂಡದಿಂದ “ಮೇಧಿನಿ ಸೃಷ್ಟಿ” ಯಕ್ಷಗಾನ. ಮಯೂರಿಸ್ ಮತ್ತು ಲಯ ತಂಡಗಳಿಂದ ನವನೀತ ನಾಟ್ಯ ಪ್ರದರ್ಶನ, “ವಿದೇಶದಲ್ಲಿ ದೇಶೀಯ ಸೊಗಡು” ತಂಡದಿಂದ ಕನ್ನಡ ನಾಡಿನ ವಿವಿಧ ಉಡುಪು ಮತ್ತು ತೊಡುಗೆಗಳ ಪ್ರಸ್ತುತಿ, ಸೌರಭ ಆರ್ಟ್ಸ್ ಮತ್ತು ಆರೋಹಣಂ ತಂಡಗಳಿಂದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ವೈಭವ, ಜರ್ಮನಿಯ ಬಾಲ ನಾಗರಾಜ್ ಅವರ ತಂಡದಿಂದ ಭಾವಗೀತೆಗಳು ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಕಲಾವಿದರಾದ ವಿದ್ವಾನ್ ಸದಾಶಿವ್ ಭಟ್, ಮತ್ತು ಅವರ ಪತ್ನಿ ಶ್ರೀಮತಿ ಸಿಂಚನಾ ಮೂರ್ತಿಯವರಿಂದ ಭಕ್ತಿ – ಭಾವ ಸಂಗೀತ ಕಾರ್ಯಕ್ರಮ.
ಜಿಂಬಾಬ್ವೆ ವಿರುದ್ಧದ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ‘ಹಿಟ್ಮ್ಯಾನ್’ ನೆನಪಿಸಿದ ಅಭಿಷೇಕ್ ಶರ್ಮ!