ಮಂಡ್ಯ: ಚಿತ್ರಕಲೆಯ ಪರಂಪರೆ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಕಲಾತಪಸ್ವಿ ಆರ್ಟ್ಸ್ ಸಂಸ್ಥೆ ಕಾರ್ಯದರ್ಶಿಯೂ ಆದ ಚಿತ್ರ ಕಲಾವಿದೆ ನಮಿತಾ ಸಿದ್ದೇಗೌಡ ಹೇಳಿದರು.
ನಗರದ ಕಲಾತಪಸ್ವಿ ಆರ್ಟ್ಸ್ ಸಂಸ್ಥೆ ಕಚೇರಿಯಲ್ಲಿ ಕಲಾತಪಸ್ವಿ ಕರ್ನಾಟಕ, ಡಾ.ಈ.ಸಿ.ನಿಂಗರಾಜ್ಗೌಡ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದೃಶ್ಯ ಕಲಾ ದಿನಾಚರಣೆ ಮತ್ತು ವಿಶ್ವ ಕಲಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರಕಲೆ ಭಾವನೆ ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ. ಕುಂಚದಕಲೆ ಎನ್ನುವಂತಹದ್ದು ಎಲ್ಲರಿಗೂ ಒಲಿಯುವಂತದ್ದಲ್ಲ. ಶ್ರದ್ಧೆ, ಕಲಿಯುವ ಆಸಕ್ತಿ, ಏಕಾಗ್ರತೆ, ಸತತ ಪ್ರಯತ್ನ, ಸಮಯಪ್ರಜ್ಞೆ ಅತ್ಯಗತ್ಯ ಎಂದು ನುಡಿದರು.
ಸೃಜನಾತ್ಮಕ ಚಿತ್ರಕಲೆ ಮಾತ್ರವಲ್ಲದೆ ಶಿಲ್ಪಕಲೆ, ಛಾಯಾಗ್ರಹಣ, ಸಂಗೀತ ನೃತ್ಯ, ರಂಗಭೂಮಿ, ಬರಹ ಕಲೆಯನ್ನು ಗೌರವಿಸುವುದರ ಜತೆಗೆ ಕಲೆ ಮತ್ತು ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏ.15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ಇದರ ಇತಿಹಾಸ ಮತ್ತು ಮಹತ್ವ ದೊಡ್ಡದಿದೆ. ಇಟಲಿಯ ಶ್ರೇಷ್ಟ ವರ್ಣಚಿತ್ರಕಾರ ಲಿಯೊನಾರ್ಡೊ ಡಾವಿನ್ಸಿ ಅವರ ಜನ್ಮದಿನವನ್ನು ವಿಶ್ವ ಕಲಾದಿನ ಎಂದು ಘೋಷಿಸಲಾಗಿದೆ. ಇವರು ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಇಂಜಿನಿಯರ್ ಮತ್ತು ವಿಜ್ಞಾನಿ. ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೇ ಪ್ರಪಂಚದಾದ್ಯಂತ ಖ್ಯಾತಿ ಪಡೆದವರು ಎಂದು ಸ್ಮರಿಸಿದರು.
ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಒಳಗೊಂಡಅತೆ ವಿವಿಧ ವಿಭಾಗಗಳ ಕಲೆಗಾರರ ಭಾವನೆಗಳಿಗೆ ಗೌರವ ಸಲ್ಲಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಕಲೆ ಮಾನವ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ. ಹಿಂದಿನಿಂದಲೂ ಭಾವನೆಗಳನ್ನು ವ್ಯಕ್ತಪಡಿಸಲು, ಸಂವಹನ ನಡೆಸಲು ಸುತ್ತಲಿನ ಪ್ರಪಂಚದ ಸೌಂದರ್ಯವನ್ನು ಸೆರೆ ಹಿಡಿಯಲು ಚಿತ್ರಕಲೆಯನ್ನೇ ಬಳಸಲಾಗುತ್ತಿತ್ತು. ಇಂದಿನ ವಿದ್ಯಾರ್ಥಿಗಳು ಚಿತ್ರಕಲೆ ಕಲಿಯುವುದರಿಂದ ಅಕ್ಷರಗಳು ಮುದ್ದಾಗಿರುತ್ತವೆ. ಶಾಲಾ ಪಠ್ಯದಲ್ಲಿ ಚಿತ್ರ-ರೇಖೆಗಳನ್ನು ಸುಲಭವಾಗಿ ಬರೆಯಬಹುದು. ಗುಣಪಟ್ಟದ ಚಿತ್ರಗಳಿಂದ ಉತ್ತಮ ಅಂಕಪಡೆಯಬಹುದು. ಸುಂದರ ತಾಣ, ಅಪರೂಪದ ಪಕ್ಷಿ, ವಾತಾವರಣದ ಸೌಂದರ್ಯ ಚಿತ್ರಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಕಲಾವಿದ ಅನಿಲ್ಕುಮಾರ್, ಚಿತ್ರಕಲಾ ವಿದ್ಯಾರ್ಥಿಗಳಾದ ಪ್ರಿಷಾ ಸುನಿಲ್, ನಯನಾ, ಗಾನವಿ, ಅವಿಜ್ಞಾ ಇತರರಿದ್ದರು.
ಪುರಾತನ ಕಾಲದಿಂದ ಅಸ್ಥಿತ್ವದಲ್ಲಿರುವ ಚಿತ್ರಕಲೆ: ಕಲಾತಪಸ್ವಿ ಆರ್ಟ್ಸ್ ಸಂಸ್ಥೆ ಕಾರ್ಯದರ್ಶಿ ನಮಿತಾ ಸಿದ್ದೇಗೌಡ ಹೇಳಿಕೆ

You Might Also Like
ಅನಾನಸ್ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips
Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…
ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನ ಒಣಗುತ್ತಿದೆಯೇ? ತಾಜಾವಾಗಿಡಲು ಈ ರೀತಿ ಮಾಡಿ | Summer
Summer: ಜನರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನ ಮತ್ತು…
ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್ನ ಶತ್ರುಗಳು! Cholesterol
Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…