More

    ಪಾಕಿಸ್ತಾನದ ನನಕಾನ ಗುರುದ್ವಾರದ ಮೇಲೆ ಕಲ್ಲು ತೂರಾಟದ ಬೆನ್ನಲ್ಲೇ ಸಿಖ್​ ಯುವಕನ ಕೊಲೆ

    ಇಸ್ಲಾಮಾಬಾದ್​: ಪಾಕಿಸ್ತಾನದ ಪೇಶಾವರದಲ್ಲಿ ಸಿಖ್​ ಜನಾಂಗದ ಯುವಕನೊಬ್ಬನ ಕೊಲೆಯಾಗಿದೆ. ನನಕಾನದ ಸಾಹಿಬ್​ ಗುರುದ್ವಾರದ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಈ ಕೊಲೆ ನಡೆದಿದೆ.

    ಪೇಶಾವರದ ಚಮ್​ಕಾನಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಗೈಯ್ಯಲಾಗಿದೆ. ರವೀಂದ್ರ ಸಿಂಗ್​ (25) ಕೊಲೆಯಾದ ಸಿಖ್​ ಯುವಕ. ಕೊಲೆ ಬಗ್ಗೆ ಈವರೆಗೆ ಯಾರನ್ನು ಬಂಧಿಸಿಲ್ಲ.

    ಮಲೇಷ್ಯಾ ನಿವಾಸಿಯಾಗಿದ್ದ ರವೀಂದ್ರ ಸಿಂಗ್​, ಹರ್ಮಿತ್​ ಸಿಂಗ್​ ಎಂಬ ಪತ್ರಕರ್ತನ ಸೋದರ. ಈತ ಪೇಶಾವರಕ್ಕೆ ಶಾಪಿಂಗ್​ ಮಾಡಲು ಬಂದಿದ್ದನು.

    ಶುಕ್ರವಾರವಷ್ಟೇ ಗುರು ನಾನಾಕ್​ ಜನ್ಮ ಸ್ಥಳವಾದ ನನಕಾನ ಗುರುದ್ವಾರದ ಮೇಲೆ ಕಲ್ಲು ತೂರಾಟ ನಡೆದಿದ್ದ ಪ್ರದೇಶದ ಬಳಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.

    ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು, ಸಿಖ್​ ನಿವಾಸಿಗಳ ರಕ್ಷಣೆಗೆ ಧಾವಿಸಲು ಭಾರತವು ಪಾಕಿಸ್ತಾನವನ್ನು ಆಗ್ರಹಿಸಿತ್ತು. ಪಾಕಿಸ್ತಾನ ಅಧ್ಯಕ್ಷ ಇಮ್ರಾನ್​ ಖಾನ್​ ಹತ್ಯೆಯನ್ನು ಖಂಡಿಸಿದ್ದಾರೆ.

    ನನಕಾನ ಗುರುದ್ವಾರದ ಮೇಲಿನ ಕಲ್ಲು ತೂರಾಟವನ್ನು ಖಂಡಿಸಿರುವ ಬಿಜೆಪಿ, ಪಾಕಿಸ್ತಾನದಲ್ಲಿ ನಡೆದ ದೇಗುಲದ ಮೇಲಿನ ದಾಳಿಯನ್ನು ಅಲ್ಪ ಸಂಖ್ಯಾತರ ಮೇಲೆ ನಡೆದ ದಬ್ಬಾಳಿಕೆ ಎಂದಿದೆ.

    ಆ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಕೇಂದ್ರ ಸಚಿವ ಹರ್ದಿಪ್​ ಸಿಂಗ್​ ಪುರಿ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts