ಸಾತನೂರು: ಚೂಡಳ್ಳಿ ಬಳಿಯಿರುವ ಕಾವೇರಿ ವನ್ಯಧಾಮದ ಚೆಕ್ಪೋಸ್ಟ್ ಬಂದ್ ಮಾಡಿದ್ದು, ಹೊಸ ವರ್ಷಾಚರಣೆಗೆ ಮುತ್ತತ್ತಿಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಸಾತನೂರು ಮಾರ್ಗವಾಗಿ ಸಾವಿರಾರು ಪ್ರವಾಸಿಗರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಾರೆ. ಮುತ್ತತ್ತಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿಗೆ ಸೇರಿದ್ದು, ತಹಸೀಲ್ದಾರ್ ಚಂದ್ರಮೌಳಿ ಮಂಗಳವಾರ (ಡಿ.31)ರಂದು ಬೆಳಗ್ಗೆ 6 ಗಂಟೆಯಿಂದ 2020ರ ಜ.2ರ ಬೆಳಗ್ಗೆ 6 ಗಂಟೆವರೆಗೆ ಪ್ರವಾಸಿಗರ ಭೇಟಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಚೂಡಹಳ್ಳಿ ಚೆಕ್ಪೋಸ್ಟನ್ನು ಡಿ.31ರಿಂದಲೇ ಬಂದ್ ಮಾಡಲಾಗುತ್ತದೆ.
ಮುತ್ತತ್ತಿ ಪ್ರದೇಶ ಕಾವೇರಿ ವನ್ಯಧಾಮವಾಗಿರು ವುದರಿಂದ ವನ್ಯಜೀವಿ ಕಾನೂನು ಪ್ರಕಾರ ರಾತ್ರಿ ವೇಳೆಯೂ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ವನ್ಯಜೀವಿ ಕಾಯ್ದೆ ಪ್ರಕಾರ ಸಂಜೆ 5 ಗಂಟೆ ನಂತರ ಕಾವೇರಿ ವನ್ಯಜೀವಿ ಧಾಮದೊಳಗೆ ಪ್ರವಾಸಿಗರನ್ನು ಬಿಡುವಂತಿಲ್ಲ. ಈ ಬಾರಿ ಹೊಸ ವರ್ಷಾಚರಣೆಯಂದು ಮೂರು ದಿನ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
| ಕಿರಣ್ ಕುಮಾರ್ ಜಿ. ಕರತಂಗಿ ಸಂಗಮ ಆರ್ಎಫ್ಒ