ಕಕ್ಕೇರಾ ಜೆಸ್ಕಾಂ ಕಚೇರಿ ಮುಂದೆ ಪುರಸಭೆ ಸದಸ್ಯರಿಂದ ರಾತ್ರೋರಾತ್ರಿ ಧರಣಿ

blank

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ವಿದ್ಯುತ್ ಸರಬರಾಜು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕಕ್ಕೇರಾ ಪಟ್ಟಣದಲ್ಲಿ ಇರುವ ಜೆಸ್ಕಾಂ ಕಚೇರಿ ಮುಂದೆ ಪುರಸಭೆ ಸದಸ್ಯರೊಬ್ಬರು ಬಡಾವಣೆ ಜನರ ಜತೆಗೂಡಿ ಗುರುವಾರ ಮಧ್ಯರಾತ್ರಿ ಧರಣಿ ಕುಳಿತಕೊಂಡಿದ್ಸಾರೆ.

blank

2 ನೇ ವಾರ್ಡ್ ಸದಸ್ಯ ಸದ್ಧಾಂ ಹುಸೇನ್ ಎಂಬುವರು ಈಗ ಧರಣಿ ನಡೆಸುತ್ತಿದ್ದಾರೆ. ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 2 ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಸುಮಾರು 60-70 ಮನೆಗಳ ನಿವಾಸಿಗಳು ಕತ್ತಲಲ್ಲಿ ಇರುವಂತಾಗಿದೆ. ಈ ಕುರಿತು ದೂರು ನೀಡಿದರೂ ಜೆಸ್ಕಾಂನವರು ಸ್ಪಂದಿಸದ ಕಾರಣ ರಾತ್ರೋರಾತ್ರಿ ಅವರು ಧರಣಿ ಶುರು ಮಾಡಿದ್ದಾರೆ. ಅಧಿಕಾರಿಗಳು ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಅಧಿಕಾರಿಗಳ ಧರಣಿ ಸ್ಥಳಕ್ಕೆ ಆಗಮಿಸಿದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank