ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ವಿದ್ಯುತ್ ಸರಬರಾಜು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕಕ್ಕೇರಾ ಪಟ್ಟಣದಲ್ಲಿ ಇರುವ ಜೆಸ್ಕಾಂ ಕಚೇರಿ ಮುಂದೆ ಪುರಸಭೆ ಸದಸ್ಯರೊಬ್ಬರು ಬಡಾವಣೆ ಜನರ ಜತೆಗೂಡಿ ಗುರುವಾರ ಮಧ್ಯರಾತ್ರಿ ಧರಣಿ ಕುಳಿತಕೊಂಡಿದ್ಸಾರೆ.

2 ನೇ ವಾರ್ಡ್ ಸದಸ್ಯ ಸದ್ಧಾಂ ಹುಸೇನ್ ಎಂಬುವರು ಈಗ ಧರಣಿ ನಡೆಸುತ್ತಿದ್ದಾರೆ. ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 2 ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಸುಮಾರು 60-70 ಮನೆಗಳ ನಿವಾಸಿಗಳು ಕತ್ತಲಲ್ಲಿ ಇರುವಂತಾಗಿದೆ. ಈ ಕುರಿತು ದೂರು ನೀಡಿದರೂ ಜೆಸ್ಕಾಂನವರು ಸ್ಪಂದಿಸದ ಕಾರಣ ರಾತ್ರೋರಾತ್ರಿ ಅವರು ಧರಣಿ ಶುರು ಮಾಡಿದ್ದಾರೆ. ಅಧಿಕಾರಿಗಳು ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಅಧಿಕಾರಿಗಳ ಧರಣಿ ಸ್ಥಳಕ್ಕೆ ಆಗಮಿಸಿದರು.