ದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಅಭಿಮಾನಿಗಳಿಗೆ ಶಾಕ್ ಸುದ್ದಿಯೊಂದು ಹೊರ ಬಿದ್ದಿದೆ.
ಇದನ್ನೂ ಓದಿ: ಪದಕಗಳನ್ನು ಗಂಗಾ ನದಿಗೆ ಎಸೆದರೆ ನ್ಯಾಯ ಸಿಗದು, ಸಾಕ್ಷಿ ತೋರಿಸಿ: ಬ್ರಿಜ್ ಭೂಷಣ್ ಸಿಂಗ್
ಐಪಿಎಲ್ ಚಾಂಪಿಯನ್ ಆದ ಬೆನ್ನಲ್ಲೇ ನಾಯಕ ಎಂ.ಎಸ್.ಧೋನಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. 2023ರ ಐಪಿಎಲ್ ಆರಂಭದಿಂದಲೂ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಈ ಕುರಿತು ಕೋಚ್ ಸ್ಟೀಫನ್ ಫ್ಲೇಮಿಂಗ್ ಕೂಡ ಹೇಳಿದ್ದರು.
ಧೋನಿ ತಮ್ಮ ಮೊಣಕಾಲು ನೋವಿನ ಚಿಕಿತ್ಸೆಗಾಗಿ ಮುಂಬೈನಲ್ಲಿರುವ ಕೋಕಿಲಾ ಬೆನ್ ಆಸ್ಪತ್ರೆಗೆ ಸೇರಿದ್ದಾರೆ ಎಂದು ಹೇಳಲಾಗುತ್ತಿದ್ದಾರೆ. ಆದರೆ ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್, ಬಿಸಿಸಿಐ ಮತ್ತು ಧೋನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
ಸದ್ಯಕ್ಕೆ, ಅಭಿಮಾನಿಗಳು ಮತ್ತು ಫ್ರಾಂಚೈಸ್ ಅವರು ಫಿಟ್ ಆಗಿದ್ದಾರೆ ಮತ್ತು ಮುಂದಿನ ಸೀಸನ್ಗೆ ಆಯ್ಕೆಗೆ ಲಭ್ಯವಾಗುತ್ತಾರೆ ಎಂದು ಭರವಸೆ ಹೊಂದಿದ್ದಾರೆ.(ಏಜೆನ್ಸೀಸ್)