ಮೃಣಾಲ್ ಠಾಕುರ್ ‘ಸೀತಾರಾಮನ್’ ಸಿನಿಮಾ ಮೂಲಕ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ ಮೊದಲ ಚಿತ್ರವೇ ಸೂಪರ್ ಹಿಟ್. ಆಯಿತು ಮೃಣಾಲ್ ಪಡ್ಡೆ ಹುಡುಗರ ಕ್ರಶ್ ಆಗಿ ಬಿಟ್ಟಿದ್ದಾರೆ.
ಇತ್ತೀಚೆಗೆ ಮದುವೆ ವಿಚಾರವಾಗಿ ಸಾಕಷ್ಟು ನಟ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಇದೀಗ ಆ ಲಿಸ್ಟ್ನಲ್ಲಿ ಮೃಣಾಲ್ ಠಾಕುರ್ ಹೆಸರೂ ಕೂಡಾ ಕೇಳಿ ಬರುತ್ತಿದೆ.
ಹೌದು ಇತ್ತೀಚೆಗೆ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ‘ಸೀತಾರಾಮ’ ಚಿತ್ರದ ನಾಯಕಿಯಾಗಿ ಮೃಣಾಲ್ ಠಾಕೂರ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಕೈಯಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಈ ವೇಳೆ ಅಲ್ಲು ಅರವಿಂದ್ ಅವರು ಮೃಣಾಲ್ ಠಾಕೂರ್ ಬಗ್ಗೆ ಮಾತನಾಡಿದರು.
ಈ ವೇಳೆ ಶೀಘ್ರದಲ್ಲೇ ಮೃಣಾಲ್ ಹೈದರಾಬಾದ್ನ ಹುಡುಗನೊಂದಿಗೆ ಮದುವೆಯಾಗಲಿ ಎಂದು ಆಶೀರ್ವದಿಸಿದರು. ಗಮನಿಸಬೇಕಾದ ವಿಚಾರ ಅದಲ್ಲ ಈ ಹಿಂದೆ ಅಲ್ಲು ಅರವಿಂದ್ ಲಾವಣ್ಯ ತ್ರಿಪಾಠಿ ಅವರನ್ನು ಉದ್ದೇಶಿಸಿ, ಹೈದರಾಬಾದ್ನ ಹುಡುಗನನ್ನು ಮದುವೆಯಾಗಬೇಕೆಂದು ಹೇಳಿದ್ದರು. ಅದೇ ರೀತಿ ಲಾವಣ್ಯ ಅವರ ಮದುವೆ ನವೆಂಬರ್ 1 ರಂದು ಮೆಗಾ ಪ್ರಿನ್ಸ್ ವರುಣ್ ತೇಜ್ ಅವರೊಂದಿಗೆ ನಡೆಯಲಿದೆ.
ಅವರ ಮಾತುಗಳು ನಿಜವಾಗಿದ್ದನ್ನ ಕಂಡು ಜನರು ಹುಬ್ಬೇರಿಸಿದ್ದಾರೆ. ಸದ್ಯ ಮೃಣಾಲ್ ಕೂಡ ಹೈದರಾಬಾದ್ ಹುಡುಗನನ್ನು ಮದುವೆಯಾಗುವ ಆಶೀರ್ವಾದ ಪಡೆದಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ.
ನಿರ್ಮಾಪಕ ಅಲ್ಲು ಅರ್ವಿಂದ್ ಮಾತು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.