More

    ಧಾರ್ವಿುಕ ಆಚರಣೆಗಳಿಗಿಂತ ನೈತಿಕ ಮೌಲ್ಯಗಳು ಮುಖ್ಯ

    ವಿಜಯವಾಣಿ ಸುದ್ದಿಜಾಲ ಗದಗ

    ಧಾರ್ವಿುಕ ಆಚರಣೆಗಳಿಗಿಂತ ನೈತಿಕ ಮೌಲ್ಯಗಳು ಮುಖ್ಯ. ಲಿಂಗಾಯತರು ಶರಣ ಸಂಸ್ಕೃತಿಯ ಆಚರಣೆ ಜೊತೆಗೆ ಬಸವಾದಿ ಪ್ರಮಥರು ಹಾಕಿಕೊಟ್ಟ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ನಿಜವಾದ ಧರ್ವಚರಣೆ ಎನಿಸಿಕೊಳ್ಳುತ್ತದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ಶಿವಾನಂದ ನಗರದ ಬಸವಮಂಟಪದಲ್ಲಿ ಭಾನುವಾರ ಬಸವದಳದ 26ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಬಸವತತ್ವ ದರ್ಶನ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    15 ದಿನಗಳ ಕಾಲ ಪ್ರವಚನ ನೀಡಿದ ಶಿವಮೊಗ್ಗದ ಬಸವ ಮರುಳಸಿದ್ಧ ಶ್ರೀಗಳು ಗುರು-ಲಿಂಗ-ಜಂಗಮದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದು, ಆ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಸಿಕ್ಕಿದ್ದು ಶ್ಲಾಘನೀಯ. ಜಂಗಮ ಎಂದರೆ ವಿಶಾಲಾರ್ಥದಲ್ಲಿ ಸಮಾಜ ಎಂದರ್ಥ. ಎನ್ನ ಲಿಂಗವ್ಯಸನಿ, ಜಂಗಮಪ್ರೇಮಿಯಾಗಿಸಯ್ಯಾ ಎಂದು ಬಸವೇಶ್ವರ ಹೇಳಿದಂತೆ ಇಷ್ಟಲಿಂಗಪೂಜೆ-ಸಮಾಜ ಸೇವೆ ಲಿಂಗಾಯತರ ಆದ್ಯ ಕರ್ತವ್ಯವಾಗಬೇಕು ಎಂದರು.

    ಶಿವಮೊಗ್ಗದ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಗದಗ ನಗರ ಕೋಮುಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿನ ಜನರು ಬಸವಪ್ರಜ್ಞೆ ಉಳ್ಳವರಾಗಿದ್ದಾರೆ. ಈ ಪುಣ್ಯಭೂಮಿಯಲ್ಲಿ ಪ್ರವಚನ ನೀಡಿದ್ದು ಅವಿಸ್ಮರಣೀಯ ಎಂದು ಹೇಳಿದರು.

    12ನೇ ಶತಮಾನದಲ್ಲಿ ಬರೀ ಧಾರ್ವಿುಕ ಟೊಳ್ಳು ಆಚರಣೆಗಳಿದ್ದವು. ಮೌಲ್ಯಗಳೇ ಇರಲಿಲ್ಲ. ಆದ್ದರಿಂದ, ಬಸವೇಶ್ವರ ಸ್ಥಾಪಿಸಿದ ಮೌಲ್ಯಯುತ ಲಿಂಗಾಯತ ಧರ್ಮ ಮುನ್ನೆಲೆಗೆ ಬಂದಿತು. ಇಷ್ಟಲಿಂಗ ಬರೀ ಧಾರ್ವಿುಕ ಲಾಂಛನವಲ್ಲ ಅದು ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಆದ್ದರಿಂದ ಲಿಂಗಾಯತರು ಅಂಗದ ಮೇಲೆ ಲಿಂಗ ಧರಿಸಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನೆಮ್ಮದಿಯ ಬದುಕಿಗೆ ಬವಸತತ್ವ ಬೇಕು. ನೈತಿಕತೆ ಕುಸಿಯುತ್ತಿರುವ ಈ ಆಧುನಿಕ ದಿನಗಳಲ್ಲಿ ಇಂಥ ಪ್ರವಚನಗಳು ಹೆಚ್ಚು ಪ್ರಸ್ತುತ ಎಂದು ಹೇಳಿದರು.

    ಆದರ್ಶ-ತತ್ವಗಳನ್ನು ನುಡಿಯುವುದಕ್ಕೆ ಮಾತ್ರ ಸೀಮಿತಗೊಳಿಸದೆ ಆಚರಣೆಗೆ ತರಬೇಕು. ಕಾಯಕ-ದಾಸೋಹದಂಥ ಶ್ರೇಷ್ಠ ತತ್ವಗಳನ್ನು ಒಳಗೊಂಡ ಬಸವತತ್ವವು ಸರ್ವವ್ಯಾಪಿಯಾಗಿದ್ದು, ಅದನ್ನು ಭಾರತೀಯರೆಲ್ಲರೂ ಅನುಸರಿಸಬೇಕು. ಬಸವೇಶ್ವರರ ಜಾತ್ಯಾತೀತ ಸಮಾಜ ನಿರ್ವಿುಸಲು ಎಲ್ಲರೂ ಶ್ರಮಿಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿ.ಕೆ. ಕರೇಗೌಡ್ರ ಮಾತನಾಡಿ, ಬಸವದಳವು ಶರಣ ಸಂಸ್ಕೃತಿಯ ನಿಜಾಚರಣೆಗಳನ್ನು ಪಸರಿಸಲು ಕಟಿಬದ್ಧವಾಗಿದೆ. 7 ವರ್ಷಗಳಿಂದ ಬಸವ ತತ್ವ ದರ್ಶನ ಪ್ರವಚನ ನಡೆಯುತ್ತಿದೆ. ಬಸವ ಮರುಳಸಿದ್ಧ ಶ್ರೀಗಳ ಪ್ರವಚನ ಹಿಂದಿನ ಎಲ್ಲ ಪ್ರವಚನಗಳಿಗೆ ಕಿರೀಟಪ್ರಾಯವಾಗಿದೆ. ಗಟ್ಟಿ ಮನಸ್ಸಿದ್ದವರು ಮಾತ್ರ ಬಸವತತ್ವ ಆಚರಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

    ಬಸವತತ್ವ ಪ್ರಚಾರಕ ಶಿವಾನಂದ ಹೊಂಬಳ, ಸಾಮಾಜಿಕ ಕಾರ್ಯಕರ್ತ ಜಿ.ವಿ. ಮಳಲಿ, ನಗರಸಭೆ ಮಾಜಿ ಸದಸ್ಯ ಅನಿಲ ಗರಗ, ಶರಣಬಸವ ಮಠಪತಿ ಉಪಸ್ಥಿತರಿದ್ದರು.

    ಪಿಎಚ್​ಡಿ ಪದವಿ ದೊರೆತ ಹಿನ್ನೆಲೆಯಲ್ಲಿ ಬಸವ ಮರುಳಸಿದ್ಧ ಶ್ರೀಗಳನ್ನು ಸನ್ಮಾನಿಲಾಯಿತು. ವಿದ್ಯಾರ್ಥಿ ಶಿವಯೋಗಿ ಜಿನಗಾ ಫ.ಗು. ಹಳಕಟ್ಟಿ ಅವರ ವೇಷತೊಟ್ಟು ಪ್ರಸ್ತುತಪಡಿಸಿದ ವಚನಗಳು ಜನಮನ ಸೆಳೆದವು. ಎಸ್.ಎ. ಮುಗದ ಸ್ವಾಗತಿಸಿದರು. ಪ್ರಕಾಶ ಅಸುಂಡಿ, ಗಿರಿಜಾ ಹಸಬಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts