More

    ಪಿಸ್ತೂಲ್ ಹಣೆಗಿಟ್ಟು ಹಣ, ಕಾರು ದರೋಡೆ

    ಬೆಂಗಳೂರು: ಅಮೆಜಾನ್ ಕಂಪನಿ ಕ್ಯಾಬ್ ಚಾಲಕನ ಹಣೆಗೆ ಪಿಸ್ತೂಲು ಇಟ್ಟು ಹಣ ಸುಲಿಗೆ ಮಾಡಿ ಕಾರನ್ನು ಅಪಹರಿಸಿದ ಸುಲಿಗೆಕೋರರ ತಂಡ, ಬಂಧಿಸಲು ಮುಂದಾದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದೆ.

    ತಿಪ್ಪೇನಹಳ್ಳಿಯ ಗಿರೀಶ್ ದರೋಡೆಗೆ ಒಳಗಾದವ. ಸೋಮವಾರ ತಡರಾತ್ರಿ 12.30ರಲ್ಲಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದಾಗ ಪೀಣ್ಯ ಸಮೀಪದ ನೆಲಗದರನಹಳ್ಳಿ ಸಮೀಪದ ನೈಸ್ ರಸ್ತೆ ಫ್ಲೈಓವರ್​ನಲ್ಲಿ ಕಾರು ಹಾಗೂ ಎರಡು ಬೈಕ್​ಗಳಲ್ಲಿ ಬಂದ ದುಷ್ಕರ್ವಿುಗಳು ಗಿರೀಶ್ ಕಾರನ್ನು ಅಡ್ಡಗಟ್ಟಿದ್ದಾರೆ. ಗಿರೀಶ್ ಕಾರಿನಿಂದ ಕೆಳಗಿಳಿಯಲು ನಿರಾಕರಿಸಿದಾಗ ಸುಲಿಗೆಕೋರರು ಚಾಲಕನ ಹಣೆಗೆ ಗನ್ ಇಟ್ಟು ಕೆಳಗೆ ಇಳಿಸಿ 2 ಮೊಬೈಲ್ ಮತ್ತು 17 ಸಾವಿರ ರೂ. ಇದ್ದ ಪರ್ಸ್ ಕಸಿದುಕೊಂಡಿದ್ದಾರೆ. ಬಳಿಕ ಕಾರನ್ನೂ ಅಪಹರಿಸಿ ಪರಾರಿಯಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ದಾರಿಹೋಕರ ನೆರವಿನಿಂದ ಗಿರೀಶ್ ‘ನಮ್ಮ 100’ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಮಾಹಿತಿ ಪಡೆದ ಪೊಲೀಸರು, ಆರೋಪಿಗಳು ಪರಾರಿಯಾದ ದಿಕ್ಕಿನಲ್ಲಿ ಬೆನ್ನತ್ತಿದ್ದರು. ಹೆಸರಘಟ್ಟ ಬಳಿ ಸುಲಿಗೆಕೋರರ ಗ್ಯಾಂಗ್ ಇರುವ ಖಚಿತ ಮಾಹಿತಿ ಮೇರೆಗೆ ಗಸ್ತು ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಮತ್ತು ಸಿದ್ದಲಿಂಗಮೂರ್ತಿ ಅಲ್ಲಿಗೆ ತೆರಳಿದ್ದರು. ಅವರ ಮೇಲೆ ಹಲ್ಲೆ ನಡೆಸಿದ್ದು, ಗಿರೀಶ್ ಕಾರು ಬಿಟ್ಟು ತಮ್ಮ ಕಾರು ಮತ್ತು ಬೈಕ್​ಗಳಲ್ಲಿ ತಪ್ಪಿಸಿಕೊಂಡಿದ್ದಾರೆ. ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಮೆಜಾನ್ ಚಾಲಕ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

    | ಎನ್. ಶಶಿಕುಮಾರ್ ಡಿಸಿಪಿ, ಉತ್ತರ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts