ವಿರಾಜಪೇಟೆ: ಪಟ್ಟಣದಲ್ಲಿನ ತಾಲೂಕು ಮೈದಾನದಲ್ಲಿ ಹಿಂದು ಮಲಯಾಳಿ ಒಕ್ಕೂಟದಿಂದ ವಿಶು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ಪುರುಷರ ರಾಷ್ಟ್ರಮಟ್ಟದ 5+2 ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಿಡ್ ಸಿಟಿ ಸುಂಟಿಕೊಪ್ಪ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು.

ಪಂದ್ಯಾವಳಿಯ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಡ್ಸ್ ಎಫ್.ಸಿ. ಸಿದ್ದಾಪುರ ಮತ್ತು ಕಲ್ಲು ಬಾಯ್ಸ ಅನಿ ಫ್ರೆಂಡ್ಸ್ ಕಲ್ಲುಬಾಣೆ ತಂಡಗಳ ನಡುವೆ ಸೆಣಸಾಟ ನಡೆದು 2-1 ಗೋಲುಗಳ ಅಂತರದಲ್ಲಿ ಕಲ್ಲು ಬಾಯ್ಸ ಅನಿ ಫ್ರೆಂಡ್ಸ್ ಕಲ್ಲುಬಾಣೆ ತಂಡ ಫೈನಲ್ ಪ್ರವೇಶ ಪಡೆಯಿತು.
ದ್ವೀತಿಯ ಸೆಮಿಫೈನಲ್ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಫೀಫಾ ಪೆರುಂಬಾಡಿ ತಂಡಗಳ ನಡುವೆ ನಡೆಯಿತು. ಉಭಯ ತಂಡಗಳು ಗೋಲು ಗಳಿಸಲು ಶಕ್ತವಾಗಲಿಲ್ಲ. ಪೆನಾಲ್ಟಿ ಸ್ಟ್ರೋಕ್ನಲ್ಲಿ 0-1 ಗೋಲುಗಳಿಂದ ಮಿಡ್ ಸಿಟಿ ಸುಂಟಿಕೊಪ್ಪ ತಂಡ ಜಯ ಪಡೆದು ಫೈನಲ್ಗೆ ಅರ್ಹತೆ ಗಿಟ್ಟಿಸಿತು.
ಫೈನಲ್ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಕಲ್ಲು ಬಾಯ್ಸ ಅನಿ ಫ್ರೆಂಡ್ಸ್ ಕಲ್ಲುಬಾಣೆ ತಂಡಗಳ ನಡುವೆ ನಡೆಯಿತು. ನಿಗದಿತ ಅವದಿಯಲ್ಲಿ ಉಬಯ ತಂಡಗಳು ಗೋಲು ಗಳಿಸಲು ವಿಫಲವಾದವು. ನಂತರ ಪೆನಾಲ್ಟಿ ಸ್ಟ್ರೋಕ್ನಲ್ಲಿ 1-0 ಗೋಲುಗಳಿಂದ ಮಿಡ್ ಸಿಟಿ ಸುಂಟಿಕೊಪ್ಪ ತಂಡವು ಗೆಲುವು ಪಡೆಯಿತು. ಆಶೀಯಮ್ ಮಂಗಳೂರು ಗಣೇಶ್ ಮತ್ತು ರಾಜೇಶ್ ಕನ್ಯಾಕುಮಾರಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.
ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ರೂ ನಗದು ಮತ್ತು ಆಕರ್ಷಕ ಟ್ರೋಫಿ, ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 75 ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಸಿವೈಸಿ ಒಂಟಿ ಅಂಗಡಿ ಉತ್ತಮ ತಂಡ, ಉತ್ತಮ ಮುನ್ನಡೆ ಆಟಗಾರ ಜಿಂಜರಿ, ಉತ್ತಮ ಗೋಲ್ ಕೀಪರ್ ಪ್ರವೀಣ್, ಸರಣಿ ಶ್ರೇಷ್ಟ ಪಾಂಡ್ಯನ್, ಸರಣಿ ಪುರುಶೋತ್ತಮ ಅದೀಲ್, ಆಲ್ ರೌಂಡರ್ ಆಗಿ ವಿಜು ವೈಯಕ್ತಿಕ ಬಹುಮಾನಗಳನ್ನು ಪಡೆದರು.
ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟು ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿನ ತಾಲೂಕು ಮೈದಾನದಲ್ಲಿ ಹಿಂದು ಮಲಯಾಳಿ ಒಕ್ಕೂಟದಿಂದ ವಿಶು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ಪುರುಷರ ರಾಷ್ಟ್ರಮಟ್ಟದ 5+2 ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆಯ ಅನೇಕ ಕ್ರೀಡಾಪಟುಗಳು ಉತ್ತಮ ಸಾಧನೆ ತೋರುತ್ತಿದ್ದಾರೆ. ಬಹುತೇಕರು ದೈಹಿಕ ಸಾಮರ್ಥ್ಯವಿಲ್ಲದೆ ಕ್ರೀಡೆಗೆ ಆಯ್ಕೆಗೊಳ್ಳುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಯುವಜನರು ಬಲಿಯಾಗುತ್ತಿರುವುದು. ಈ ಹಿನ್ನೆಲೆಯಲ್ಲಿ ಯುವಜನರು ನಿತ್ಯ ವ್ಯಾಯಾಮದ ಅಭ್ಯಾಸ ರೂಢಿಸಿಕೊಂಡು ದೈಹಿಕವಾಗಿ ಸದೃಢತೆ ಹೊಂದಬೇಕು ಎಂದು ಸಲಹೆ ನೀಡಿದರು.