ಪ್ರತಿ ವಿಷಯದಲ್ಲೂ ಪೂರ್ಣ ಅಂಕ ಗಳಿಸಲಿ

blank

ನರಗುಂದ: ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಮೇಧಾವಿ ವಿದ್ಯಾರ್ಥಿಗಳ ಪುನಶ್ಚೇತನ ವಸತಿ ಸಹಿತ ತರಬೇತಿ ಶಿಬಿರಕ್ಕೆ ಡಿಡಿಪಿಐ ಆರ್.ಎಸ್. ಬುರಡಿ ಸೋಮವಾರ ಚಾಲನೆ ನೀಡಿದರು.

‘ಪ್ರತಿ ವಿಷಯದಲ್ಲಿ ಅರ್ಥವಾಗದ ಟಾಪಿಕ್​ಗಳನ್ನು ಪಟ್ಟಿ ಮಾಡಿ, ವಿಷಯ ಪರಿಣಿತರನ್ನು ಕೇಳಿ ತಿಳಿದುಕೊಳ್ಳಬೇಕು. ಪ್ರತಿ ವಿಷಯದಲ್ಲೂ ಸಂಪೂರ್ಣ ಅಂಕಗಳಿಸಿ ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಲಿತ ಶಾಲೆ, ತಂದೆ, ತಾಯಿಗಳಿಗೆ ಕೀರ್ತಿ ತರಬೇಕು’ ಎಂದರು.

ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಶೇ. 95ರಷ್ಟು ಅಂಕ ಗಳಿಸುವ ಸಾಮರ್ಥ್ಯವಿರುವ ಮೇಧಾವಿ ವಿದ್ಯಾರ್ಥಿಗಳು ಇನ್ನುಳಿದ ಶೇ. 5 ಅಂಕ ಗಳಿಸಲು ಪ್ರಯತ್ನಿಸಿ ಸಂಪೂರ್ಣ ಶೇ. 100 ಯಶಸ್ಸು ಗಳಿಸಲು ಪ್ರಯತ್ನಿಸಬೇಕು. ಪರೀಕ್ಷೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕು ಎಂದರು. ಉತ್ತಮ ಫಲಿತಾಂಶಕ್ಕಾಗಿ ಪ್ರಕಟಿಸಿರುವ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಭಂಡಾರ, ಸಶಕ್ತ ಮಾರ್ಗದರ್ಶಿಯನು ಬಿಡುಗಡೆಗೊಳಿಸಲಾಯಿತು. ಮಾರ್ಗದರ್ಶಿ ಮುದ್ರಣಕ್ಕಾಗಿ ಸಹಕಾರ ನೀಡಿದ ವಿ.ಜಿ. ಮಮಟಗೇರಿ, ಶಂಕರಗೌಡ ನಾಯ್ಕರ ಅವರನ್ನು ಸನ್ಮಾನಿಸಲಾಯಿತು. ಗದಗ ಗ್ರಾಮೀಣ ಬಿಇಒ ವಿ.ವಿ. ನಡುವಿನಮನಿ, ಶಂಕರ ಹಡಗಲಿ, ಪಿ.ಸಿ.ಕಲಹಾಳ, ಜೆಡ್.ಎಂ. ಖಾಜಿ, ಎಸ್.ಎಲ್. ಮರಿಗೌಡರ, ಎಂ.ಆರ್. ನಾಯಕ, ರೂಪಾ ನಾಯ್ಡು, ಜಿ.ಎನ್. ದೊಡ್ಡಲಿಂಗಪ್ಪನವರ, ಬಿ.ಎ. ನದಾಫ, ಉಮೇಶ ಎಂ. ಉಪಸ್ಥಿತರಿದ್ದರು. ನಿತೀನ ಕೇಸರಕರ ಹಾಗೂ ಬಿ.ಎಫ್. ಮಜ್ಜಗಿ ನಿರ್ವಹಿಸಿದರು.

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…