ಸವಣೂರಲ್ಲಿ ಸಾಮೂಹಿಕ ಅಂತ್ಯಕ್ರಿಯೆ

blank

ಸವಣೂರ: ಮೃತದೇಹಗಳನ್ನು ಸಂಜೆ 5-20ಕ್ಕೆ ಪಟ್ಟಣಕ್ಕೆ ತರಲಾಯಿತು. ಎಲ್ಲ ಶವಗಳನ್ನು ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಿದ ಬಳಿಕ ಮುಸ್ಲಿಂ ಸಮುದಾಯದ ಪ್ರಕಾರ ಎಲ್ಲ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು.

ಅಂತಿಮ ಯಾತ್ರೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಂತಿಮ ನಮನ ಸಲ್ಲಿಸಿದರು.

ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಅಂಜುಮನ್ ಏ ಇಸ್ಲಾಂ ಸಮಿತಿ ಅಧ್ಯಕ್ಷ ಜೀಶಾನಅಹ್ಮದಖಾನ ಪಠಾಣ, ಶಾಸಕ ಯಾಸೀರಅಹ್ಮದ ಪಠಾಣ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ, ತಹಸೀಲ್ದಾರ್ ಭರತರಾಜ್ ಕೆ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಮುಲ್ಲಾ, ಫಜಲ್‌ಅಹ್ಮದ್‌ಖಾನ್ ಪಠಣ, ಪೀರ್‌ಅಹ್ಮದ್ ಗವಾರಿ, ಅಶೋಕ ಮನ್ನಂಗಿ, ಸಾದಿಕ್ ಮನಿಯಾರ, ಶಿವಕುಮಾರ ಅಡವಿಸ್ವಾಮಿಮಠ ಇತರರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ರಾಜ್ಯ ಸರ್ಕಾರ ಘೋಷಿಸಿದ್ದ 3 ಲಕ್ಷ ರೂ.ಗಳ ಪರಿಹಾರದ ಆದೇಶದ ಪತ್ರವನ್ನು ಕುಟುಂಬದ ವಾರಸುದಾರರಿಗೆ ಜಿಲ್ಲಾಧಿಕಾರಿಗಳು, ಶಾಸಕರು ವಿತರಿಸಿದರು.

Share This Article

ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದಿರಾ; ಇಲ್ಲಿದೆ ಅದರ ಹಿಂದಿನ ಕಾರಣದ ಮಾಹಿತಿ| Health Tips

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಯಾರಿಗಾದರೂ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಅದರ ಹಿಂದೆ ಹಲವು ಕಾರಣಗಳಿರಬಹುದು.…

Brown or White Bread.. ಯಾವುದು ಆರೋಗ್ಯಕ್ಕೆ ಉತ್ತಮ; ತಜ್ಞರು ಹೇಳೊದೇನು? | Health Tips

ಆರೋಗ್ಯದ ಕಾರಣಗಳಿಗಾಗಿ ನೀವು ವೈಟ್​ ಬ್ರೆಡ್ ಬದಲಿಗೆ ಬ್ರೌನ್​ ಬ್ರೆಡ್ ತಿನ್ನುತ್ತೀರಾ? ಸರಿ. ನೀವು ಮಾತ್ರವಲ್ಲ…

ಹೆಲ್ಮೆಟ್​ ಬಳಸುವುದರಿಂದ ಕೂದಲು ಉದುರುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​…! Hair Loss

Hair Loss : ಅತಿಯಾಗಿ ಹೆಲ್ಮೆಟ್​ ಬಳಸುವ ಸವಾರರಲ್ಲಿ ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿನ ಸಮಸ್ಯೆ…