blank

ತಾತ್ಕಾಲಿಕ ರಸ್ತೆಯಲ್ಲಿ ಸಿಲುಕಿದ ಬಸ್

blank

ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆಗೆ ಪೋತ್ನಾಳ, ನಂದಿಹಾಳ, ಗವಿಗಟ್ಟು ಸೇರಿ ಇತರೆ ಹಳ್ಳಗಳು ತುಂಬಿ ಹರಿದವು.

ಪಟ್ಟಣದ ಹೊರವಲಯದ ಬಾಷಮೀಯಾ ಡಿಗ್ರಿ ಕಾಲೇಜು ಹತ್ತಿರ ರಾಯಚೂರು-ಸಿಂಧನೂರು ಹೆದ್ದಾರಿ ಬದಿಯಲ್ಲಿ ವಾಹನ ಸಂಚರಿಸಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯು ಮಳೆಗೆ ಕೊಚ್ಚಿ ಹೋದ ಪರಿಣಾಮ ಸಾರಿಗೆ ಬಸ್ ಸಿಲುಕಿ ಎರಡ್ಮೂರು ತಾಸು ಸಂಚಾರಕ್ಕೆ ಅಡಚಣೆಯಾಯಿತು.

ನಂತರ ಜೆಸಿಬಿಯಿಂದ ಬಸ್ ತೆರವು ಮಾಡಿದಾಗ ವಾಹನಗಳ ಸಂಚಾರ ಪ್ರಾರಂಭವಾಯಿತು.
ರಾತ್ರಿಯಿಂದ ಸುರಿದ ಮಳೆಗೆ ಹೊಲ-ಗದ್ದೆಗಳಲ್ಲಿ ನೀರು ನಿಂತಿವೆ. ಬಿತ್ತನೆ ಮಾಡಿದ ಹತ್ತಿಗೆ ಮಳೆಯ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆಯಿಂದ ತಾಲೂಕಿನಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

Share This Article

ಶ್ರಾವಣ ಮಾಸದಲ್ಲಿ ಕ್ಷೌರ ಮಾಡಿಸಬಾರದು.. ಇದರ ಹಿಂದಿದೆ ವೈಜ್ಞಾನಿಕ ಕಾರಣ..! Shravan

Shravan: ಭಾರತೀಯ ಸಂಸ್ಕೃತಿಯಲ್ಲಿ, ಸಾವನ್ ಮಾಸವನ್ನು ಶಿವನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿ, ಜನರು…

ಮಳೆಗಾದಲ್ಲಿ ಮೊಸರು ತಿನ್ನಬೇಕೇ? ಬೇಡವೇ? ಇಲ್ಲಿದೆ ಆರೋಗ್ಯಕರ ಮಾಹಿತಿ… curd

ಬೆಂಗಳೂರು: ( curd )  ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಮಳೆಗಾಲದಲ್ಲಿ…