ಭೂಸೇನೆಯ ನೂತನ ಸಾರಥಿಯಾಗಿ ಮನೋಜ್ ಪಾಂಡೆ

ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆಯವರನ್ನು ಭೂಸೇನೆಯ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಾಲಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಈ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಅವರು ಮೂರೂ ಸೇನಾ ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸಿಡಿಎಸ್ ಆಗಿದ್ದ ಜನರಲ್ ಬಿಪಿನ್ ರಾವತ್ ಕಳೆದ ಡಿಸೆಂಬರ್​ನಲ್ಲಿ ಊಟಿ ಬಳಿಯ ವೆಲ್ಲಿಂಗ್ಟನ್​ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ಇಂಜಿನಿಯರ್ ರೆಜಿ: ಮೆಂಟ್​ನ ನೇತೃತ್ವ ವಹಿಸಿರುವ ಪಾಂಡೆ, ಜನರಲ್ ನರವಣೆಯವರ ನಂತರ ಸೇನೆಯಲ್ಲಿ ಅತ್ಯಂತ ಹಿರಿಯರಾಗಿರುವುದರಿಂದ … Continue reading ಭೂಸೇನೆಯ ನೂತನ ಸಾರಥಿಯಾಗಿ ಮನೋಜ್ ಪಾಂಡೆ