More

    ಸ್ಫೋಟಕ ವಸ್ತುಗಳ ಬಗ್ಗೆ ಬಾಂಬರ್​ ಆದಿತ್ಯ ಅರಿತಿರುವುದು ಕಳವಳಕಾರಿ: ಮಂಗಳೂರು ಪೊಲೀಸ್​ ಆಯುಕ್ತ ಡಾ. ಹರ್ಷ ಆತಂಕ

    ಮಂಗಳೂರು: ಆದಿತ್ಯ ಆರೋಪಿ ಎಂದು ಖಾತರಿಯಾದ ಮೇಲೆ ಬಂಧಿಸಲಾಗಿದೆ. ನಿನ್ನೆ ರಾತ್ರಿವರೆಗೆ ನಡೆದ ವಿಚಾರಣೆಯಲ್ಲಿ ಹಲವು ವಿಷಯಗಳನ್ನು ತಿಳಿಸಿದ್ದಾನೆ ಎಂದು ಪೊಲೀಸ್​ ಆಯುಕ್ತ ಡಾ. ಪಿ. ಎಸ್​. ಹರ್ಷ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಈ ಹಿಂದಿನ ಬಾಂಬ್​ ಬೆದರಿಕೆ ಪ್ರಕರಣ ಮತ್ತು ಈಗಿನ ಬಾಂಬ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನಿಗೆ ಸಜೆ ಆಗುತ್ತದೆ. ಈ ಮೊದಲು ಆದಿತ್ಯ ಚಿಕ್ಕಬಳ್ಳಾಪುರದಲ್ಲಿ ಜೈಲು ಸಜೆ ಅನುಭವಿಸಿದ್ದಾನೆ. ಜೈಲಿನಲ್ಲಿದ್ದಾಗಲೂ ಇನ್ನೂ ಏನಾದರು ದೊಡ್ಡ ಅನಾಹುತ ಮಾಡಬೇಕು ಎಂದು ಯೋಚಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಇದನ್ನೇ ಆತ ಒಪ್ಪಿಕೊಂಡಿದ್ದಾನೆ.

    ಜೈಲಿನಿಂದ ಹೊರಬಂದ ಮೇಲೆ ಇಂಟರ್​ನೆಟ್​ಗಳಿಂದ ಬಾಂಬ್​ ತಯಾರಿ ಮತ್ತು ಸ್ಫೋಟಕಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿರುವುದು ಕಳವಳಕಾರಿ ಅಂಶ ಎಂದರು.

    ಬಾಂಬ್​ ತಯಾರಿಕೆ ಬಗ್ಗೆ ತಿಂಗಳುಗಟ್ಟಲೆ ರಿಸರ್ಚ್​ ಮಾಡಿದ್ದಾನೆ. ಆನ್​ಲೈನ್​ನಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ದೊರೆಯುವ ಸ್ಫೋಟಕ ವಸ್ತಗಳು ಬಗ್ಗೆ ತಿಳಿದಿದ್ದಾನೆ.

    ಮುಕ್ತ​ ಮಾರುಕಟ್ಟೆಯಲ್ಲಿ ಕೊಂಡರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ವಸ್ತುಗಳನ್ನು ಖರೀದಿಸಲು ಹೋಗಿಲ್ಲ. ಅಲ್ಲದೆ ಯಾವ ವಸ್ತುಗಳಿಂದ ಸ್ಫೋಟಕ ತಯಾರಿಸಬಹುದು ಮತ್ತು ಅವುಗಳನ್ನು ಹೇಗೆ ಹೊಂದಿಸಬೇಕು ಎಂಬುದರ ಬಗ್ಗೆ ಅರಿತಿರುವುದಾಗಿ ಆದಿತ್ಯ ತಿಳಿಸಿದ್ದಾನೆ ಎಂದು ಆಯುಕ್ತರ ಮಾಹಿತಿ ನೀಡಿದರು.

    ಮೈಸೂರು ಕಾಲೇಜಿನಲ್ಲಿ ​ ಎಂಬಿಎ ಪದವೀಧರ ಮತ್ತು ಬಿಇ ಮೆಕಾನಿಕಲ್​ ಇಂಜಿಯರ್​ ಪದವೀಧರನೂ ಹೌದು ಎಂದು ಒಪ್ಪಿಕೊಂಡಿದ್ದಾನೆ. ಮೊದಲು ವಿವಿಧ ಖಾಸಗಿ ಬ್ಯಾಂಕ್​ಗಳಲ್ಲಿ ಉದ್ಯೋಗ ಮಾಡಿದ ಆದಿತ್ಯ, ಒಂದೇ ಕಡೆ ಬಹಳ ದಿನಕಾಲ ಕೆಲಸ ಮಾಡುತ್ತಿರಲಿಲ್ಲ. ಒಂದೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಆಗುವುದಿಲ್ಲ ಎಂದು ಪದೇಪದೆ ಕೆಲಸ ಬದಲಿಸಿದೆ ಎಂದು ತಿಳಿಸಿದ್ದಾನೆ ಎಂದರು.

    ಪೀಣ್ಯದಲ್ಲಿ ಕಾಮಧೇನು ಆಟೋ ಮೊಬೈಲ್ಸ್​ ಕೆಲ ದಿನಗಳ ಕಾಲ ಮಾತ್ರ ಕೆಲಸ ಮಾಡಿ, ನಂತರ ಎಂಎನ್​ಸಿ ಕಂಪನಿಯಲ್ಲಿ ತನ್ನ ದಾಖಲೆಗಳನ್ನು ತಿದ್ದಿ ಕೆಲಸಕ್ಕೆ ಸೇರುತ್ತಾನೆ. ಆದರೆ ಸಿಕ್ಕಿ ಬೀಳುವ ಭಯದಿಂದ ಅಲ್ಲಿಯೂ ಕೆಲಸ ತೊರೆಯುತ್ತಾನೆ.

    ನಂತರ ಸೆಕ್ಯುರಿಟಿ ಗಾರ್ಡ್​ ಆಗಿ ಮೂಡುಬಿದಿರೆ ಕಾಲೇಜು ಹಾಗೂ ಉಜಿರೆ ಕಾಲೇಜುಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts