More

    ಬಾಂಬರ್​ ಆದಿತ್ಯ ರಾವ್​​ನನ್ನು 10 ದಿನಗಳ ಕಾಲ ಮಂಗಳೂರು ಪೊಲೀಸ್​ ಕಸ್ಟಡಿಗೆ ನೀಡಿದ ನ್ಯಾಯಾಲಯ

    ಮಂಗಳೂರು: ಏರ್​ಪೋರ್ಟ್​ನಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯ ರಾವ್​ನನ್ನು 10 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಮಂಗಳೂರು ಜೆಎಮ್ಎಫ್​ಸಿ 6 ನ್ಯಾಯಾಲಯ ಆದೇಶ ನೀಡಿದೆ.

    ನಿನ್ನೆ ಬೆಂಗಳೂರು ಎಸಿಎಂಎಂ ಕೋರ್ಟ್​ ಆದಿತ್ಯ ರಾವ್​ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿತ್ತು. ಇಂದು ಮಂಗಳೂರು ಪೊಲೀಸರು ಜೆಎಮ್ಎಫ್​ಸಿ 6 ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ಆದಿತ್ಯ ರಾವ್​ನನ್ನು ನ್ಯಾಯಾಧೀಶ ಕೆ.ಎನ್​.ಕಿಶೋರ್​ ಕುಮಾರ್​ ವಿಚಾರಣೆ ನಡೆಸಿದರು. ಈ ವೇಳೆ ಆದಿತ್ಯ ರಾವ್​ ತಾನು ಮಾಡಿದ್ದು ತಪ್ಪು, ನನಗೆ ಪಶ್ಚಾತ್ತಾಪ ಆಗಿದೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
    ಆದಿತ್ಯರಾವ್​ ಬಳಿ ಆರೋಗ್ಯ ಸರಿಯಾಗಿದೆಯಾ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ನಿಮಗೆ ಹೇಳಲಿಕ್ಕೆ ಏನಾದರೂ ವಿಷಯ ಇದೆಯಾ ಎಂದು ಕೂಡ ಪ್ರಶ್ನಿಸಿದ್ದಾರೆ. ಆದರೆ ಹೆಚ್ಚೇನೂ ಹೇಳದ ಆದಿತ್ಯ ರಾವ್​, ನಾನು ಮಾಡಿದ್ದೆಲ್ಲ ತಪ್ಪು ಎಂದಿದ್ದಾನೆ.

    15 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಆದರೆ 10 ದಿನಗಳ ಕಾಲ ಮಂಗಳೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts