ಕರೊನಾ ಸೋಂಕಿತ ಜೆಡಿಎಸ್‌ ಮುಖಂಡನ ಪುಂಡಾಟಕ್ಕೆ ಆಸ್ಪತ್ರೆ ಸಿಬ್ಬಂದಿ ಸುಸ್ತೋ ಸುಸ್ತು

ಮಂಡ್ಯ: ಕರೊನಾ ಸೋಂಕು ದೃಢಪಟ್ಟರೂ ಹಲವರಿಗೆ ಆಸ್ಪತ್ರೆಗೆ ಹೋಗಲು ಭಯ. ಅಲ್ಲಿ ಏನಾದರೂ ಮಾಡಿಬಿಟ್ಟರೆ ಎಂಬ ಆತಂಕ. ಇಂಥವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯಕೀಯ ಸಿಬ್ಬಂದಿ ಪಡುವ ಪಾಡು ಅಷ್ಟಿಷ್ಟಲ್ಲ. ಇಂಥದ್ದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದೆ. ಆದರೆ ಇಲ್ಲಿ ರಂಪಾಟ ಮಾಡಿರುವವರು ಜೆಡಿಎಸ್‌ ಮುಖಂಡ! ಇವರಿಗೆ ಕರೊನಾ ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆಗೆ ಬರಲು ಒಲ್ಲೆ ಎನ್ನುವ ಮೂಲಕ ಮನೆಗೆ ಬಂದ ವೈದ್ಯಕೀಯ ಸಿಬ್ಬಂದಿಯನ್ನು ಸುಸ್ತು ಮಾಡಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ … Continue reading ಕರೊನಾ ಸೋಂಕಿತ ಜೆಡಿಎಸ್‌ ಮುಖಂಡನ ಪುಂಡಾಟಕ್ಕೆ ಆಸ್ಪತ್ರೆ ಸಿಬ್ಬಂದಿ ಸುಸ್ತೋ ಸುಸ್ತು