More

    ಪತ್ನಿ ಕೊಲೆಗೈದವಗೆ ಜೀವಾವಧಿ ಶಿಕ್ಷೆ, ದಂಡ

    ರಾಣೆಬೆನ್ನೂರ : ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 7500 ರೂ. ದಂಡ ವಿಧಿಸಿ ಇಲ್ಲಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.

    ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ಇಲಿಯಾಸ್ ಅಹ್ಮದ್ ಬಾಬುಸಾಬ್ ಶಿರಳ್ಳಿ ಶಿಕ್ಷೆಗೊಳಗಾದ ಅಪರಾಧಿ.

    ಈತ ಸಾಹಿರಾಬಾನು ಎಂಬುವಳನ್ನು ಮದುವೆ ಮಾಡಿಕೊಂಡು ಬಂದು 6 ತಿಂಗಳು ಚೆನ್ನಾಗಿ ನೋಡಿಕೊಂಡು ನಂತರ ಆಕೆಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು. ಇದಕ್ಕೆ ಆತನ ಮನೆಯವರು ಕುಮ್ಮಕ್ಕು ನೀಡುತ್ತಿದ್ದರು. ಇದರಿಂದ ಬೇಸತ್ತ ಸಾಹಿರಾಬಾನು ಪತಿಯ ಮನೆ ಬದಲು ಬೇರೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

    6-12-2015ರಂದು ಸಾಹಿರಾಬಾನು ಮನೆಗೆ ಬಂದ ಪತಿ ಇಲಿಯಾಸಅಹ್ಮದ್, ಮದ್ಯ ಸೇವನೆಗೆ 100 ರೂ. ಕೊಡುವಂತೆ ಒತ್ತಾಯಿಸಿದ್ದನು. ಹಣ ಕೊಡಲು ಹಿಂದೇಟು ಹಾಕಿದ ಸಾಹಿರಾಬಾನು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದನು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಹಿರಾಬಾನು ಅವಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 12-12-2015ರಂದು ಮೃತಪಟ್ಟಿದ್ದಳು.

    ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts