ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ

ಜೈಪುರ: ಇಲ್ಲೊಬ್ಬ ರೋಗಿಯ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಆತ ಎಚ್ಚರ ಇರುವಾಗಲೇ ನಡೆಸಿದ್ದು, ಸರ್ಜರಿ ನಡೆಯುವಷ್ಟೂ ಕಾಲ ಆ ವ್ಯಕ್ತಿ ಗಾಯತ್ರಿ ಮಂತ್ರವನ್ನು ಪಠಿಸುತ್ತಲೇ ಇದ್ದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಜೈಪುರದ ನಾರಾಯಣ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಸೇನೆಯ ನಿವೃತ್ತ ಹವಲ್ದಾರ್​, ಸದ್ಯ ಗ್ರಾಮಸೇವಕರಾಗಿರುವ ಐವತ್ತೇಳು ವರ್ಷದ ರಿಧ್ಮಲ್ ರಾಮ್​ ಎಂಬ ವ್ಯಕ್ತಿ ಈ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪಕ್ಷವಾತ ಹಾಗೂ ತಾತ್ಕಾಲಿಕ ವಾಕ್​ದೋಷದಿಂದ ಈ ವ್ಯಕ್ತಿ ಬಳಲುತ್ತಿದ್ದರು. ಮಿದುಳಿನಲ್ಲಿ ಸಂಬಂಧಿತ ಭಾಗದಲ್ಲಿ ಉಂಟಾದ ಗಡ್ಡೆಯಿಂದ ಈ … Continue reading ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ