blank

ಕಡಿಮೆ ಬೆಲೆಗೆ ಹಳೇ ಚಿನ್ನದ ನಾಣ್ಯ ನೀಡುವುದಾಗಿ ಹೇಳಿ 7 ಲಕ್ಷ ರೂ. ವಂಚನೆ

blank

ದಾವಣಗೆರೆ: ಹಳೇ ಚಿನ್ನದ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಹಳೆಯ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ 7 ಲಕ್ಷ ರೂ. ಲಪಟಾಯಿಸಿದ ಆರೋಪದಡಿ ನಾಲ್ವರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

blank

ಮುಂಬಯಿ ಮೂಲದ ಗುಲಾಬ್‌ಚಂದ್ ಶೀತಲ್ ಪ್ರಸಾದ್ ಗುಪ್ತಾ ಮೋಸ ಹೋದವರು. ವಂಚಕರಾದ ಹರ್ಷದ್ ರಾಜಕುಮಾರ್, ರಮೇಶ್, ಅಮಿತ್ ಶೇಖ್ ಹಾಗೂ ಜೀಶಾನ್ ಶೇಖ್, ತಮ್ಮ ಬಳಿ ಇರುವ ಹಳೆಯ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿದ್ದರು.

ವಂಚಕರು ಗುಪ್ತಾ ಭೇಟಿಗೆಂದು ಸ್ಥಳ ನಿಗದಿ ಮಾಡಿ ಬಳಿಕ ಎರಡು ಕಡೆ ಜಾಗ ಬದಲಿಸಿದ್ದರು. ಅವರು ಹೇಳಿದಂತೆ ತೆರಳಿದ್ದ ಗುಪ್ತಾ ಅವರಿಂದ ದಾವಣಗೆರೆ ಲೋಕಿಕೆರೆ ರಸ್ತೆ ಬಳಿ ಹಣ ಲಪಟಾಯಿಸಿದ್ದರು. ಜು.18ರಂದು ಘಟನೆ ನಡೆದಿದ್ದು, ಶುಕ್ರವಾರ ಪ್ರಕರಣ ದಾಖಲಾಗಿದೆ.

Share This Article

ಹನುಮ ಜಯಂತಿಯಂದು ಈ ಕೆಲಸ ಮಾಡಿದರೆ ಸಾಕು, ಸಮಸ್ಯೆಗಳಿಂದ ಸಿಗುತ್ತದೆ ಮುಕ್ತಿ! hanuman jayanti

hanuman jayanti: ಹನುಮ ಜಯಂತಿಯಂದು, ಹನುಮಾನ್  ತನ್ನ ಭಕ್ತರ ಆಸೆಗಳನ್ನು ಪೂರೈಸುತ್ತಾನೆ. ಖಂಡಿತವಾಗಿಯೂ ಅವರು ತಮ್ಮ…

ಚಿಕನ್ ತಿಂದ ಮೇಲೆ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ತಿನ್ನಬೇಡಿ! chicken

chicken: ಮಾಂಸಾಹಾರಿ ಪ್ರಿಯರು ಹೆಚ್ಚಾಗಿ ಇಷ್ಟಪಡುವ ಆಹಾರಗಳಲ್ಲಿ ಕೋಳಿ ಮಾಂಸವೂ ಒಂದು. ವಾರದಲ್ಲಿ ಕನಿಷ್ಠ ಎರಡು…

ಕೂದಲು ಉದುರುವುದನ್ನು ತಡೆಯಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು? Hairfall Remedies

Hairfall Remedies: ಕೂದಲು ಉದುರುವುದನ್ನು ತಡೆಯಲು ಸಾಮಾನ್ಯ ವಿಧಾನಗಳಲ್ಲಿ ಒಂದು ನಿಯಮಿತವಾಗಿ ಎಣ್ಣೆ ಹಚ್ಚುವುದು. ಆದರೆ…