ಮಲಯಾಳಂ ಚಿತ್ರರಂಗದಲ್ಲಿ ಮುಗಿಯದ ಮೀಟೂ ವಿವಾದ : ನಿರ್ದೇಶಕನ ವಿರುದ್ಧ ನಟಿ ಮಂಜು ವಾರಿಯರ್​ ದೂರು

blank

ಕಳೆದ ವರ್ಷ ಮಲಯಾಳಂ ಚಿತ್ರರಂಗ ಸಿನಿಮಾಗಳಿಂದ ಮಾತ್ರವಲ್ಲದೇ ಮೀಟೂ ವಿವಾದಗಳಿಂದಲೂ ಹೆಚ್ಚು ಸದ್ದು ಮಾಡಿತ್ತು. ಬ್ಯಾಕ್​ ಟು ಬ್ಯಾಕ್​ ಚಿತ್ರಗಳು ಹಿಟ್​ ಆದ ರೀತಿಯಲ್ಲೇ, ಪೊಲೀಸ್​ ಠಾಣೆಯಲ್ಲಿ ದೂರುಗಳೂ ದಾಖಲಾಗಿದ್ದವು. ಈ ಹೊಸ ವರ್ಷಕ್ಕಾದರೂ ಈ ವಿವಾದ ನಿಲ್ಲುತ್ತಾ ಅಂದುಕೊಂಡರೆ, ಆ ಮಾತು ಸುಳ್ಳಾಗಿದೆ. ಇದೀಗ “ಸೆಕ್ಸಿ ದುರ್ಗ’, “ಚೋಳ’, “ವಳಕ್ಕು’ ಚಿತ್ರಗಳ ನಿರ್ದೇಶಕ ಸನಾಲ್​ ಕುಮಾರ್​ ಸಸಿಧರನ್​ ವಿರುದ್ಧ 40ಕ್ಕೂ ಅಧಿಕ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಂಜು ವಾರಿಯರ್​ ದೂರು ದಾಖಲಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಮುಗಿಯದ ಮೀಟೂ ವಿವಾದ : ನಿರ್ದೇಶಕನ ವಿರುದ್ಧ ನಟಿ ಮಂಜು ವಾರಿಯರ್​ ದೂರು

ನಿರ್ದೇಶಕ ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆಂದು ಕೊಚ್ಚಿ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್​ ದಾಖಲಿಸಿದ್ದಾರೆ. ಸದ್ಯ ಸನಾಲ್​ ಅಮೆರಿಕದಲ್ಲಿದ್ದು, ವಿಚಾರಣೆಗಾಗಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಕೊಚ್ಚಿ ಪೊಲೀಸರು ಅಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಹಾಗಂತ ಇದು ಮಂಜು ವಾರಿಯರ್​, ಸನಲ್​ ವಿರುದ್ಧ ನೀಡಿರುವ ಎರಡನೇ ದೂರು.

ಮಲಯಾಳಂ ಚಿತ್ರರಂಗದಲ್ಲಿ ಮುಗಿಯದ ಮೀಟೂ ವಿವಾದ : ನಿರ್ದೇಶಕನ ವಿರುದ್ಧ ನಟಿ ಮಂಜು ವಾರಿಯರ್​ ದೂರು

2020ರಲ್ಲಿ ಸನಲ್​ ನಿರ್ದೇಶಿಸಿದ್ದ ಚಿತ್ರದಲ್ಲಿ ಮಂಜು ವಾರಿಯರ್​ ನಟಿಸಿದ್ದರು. ಆಗಿನಿಂದಲೂ ಮಂಜು ವಾರಿಯರ್​ ಜತೆ ಸಲುಗೆ ಬೆಳೆಸಿಕೊಳ್ಳಲು ಸನಲ್​ ಪ್ರಯತ್ನಿಸುತ್ತಿದ್ದು, ಅದಕ್ಕೆ ನಟಿ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿಯೇ 2022ರಲ್ಲಿ ಮಂಜು ವಾರಿಯರ್​, ಸನಲ್​ ವಿರುದ್ಧ ದೂರು ದಾಖಲಿಸಿದ್ದರು. ಆಗ ಬಂಧನಕ್ಕೊಳಗಾಗಿದ್ದ ಸನಲ್​ ನಂತರ ಬೇಲ್​ ಪಡೆದು ಹೊರಬಂದಿದ್ದರು.

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…