ಅದ್ದೂರಿ ಕರ್ಲಹೊಂಡಲಿಂಗೇಶ್ವರ ಜಾತ್ರೋತ್ಸವ

blank

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಕರ್ಲಹೊಂಡಲಿಂಗೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಹಾಗೂ ಗುರುವಾರ ಅದ್ದೂರಿಯಾಗಿ ನೆರವೇರಿತು.

blank

ಪಟ್ಟಣದ ಬೀರೇಶ್ವರ ಮಂದಿರದಿಂದ ದೂಧಗಂಗಾ ನದಿಪಾತ್ರದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನದವರೆಗೆ ಬುಧವಾರ ಕುಂಭಮೇಳ, ಪಲ್ಲಕ್ಕಿ ಉತ್ಸವವು ಭಂಡಾರದೋಕುಳಿ, ದೀರ್ದಂಡ ನಮಸ್ಕಾರವು ಸಕಲ ವಾದ್ಯಮೇಳದೊಂದಿಗೆ ಜರುಗಿದವು. ಗುರುವಾರ ರುದ್ರಾಭಿಷೇಕ, ಗ್ರಾಮ ನೈವೇದ್ಯ ಕಾರ್ಯಕ್ರಮ, ಮಧ್ಯಾಹ್ನ ಮಹಾಪ್ರಸಾದ, ಗೀ ಗೀ ಪದಗಳ ಗಾಯನ ನಡೆದವು. ಶಂಕರಜ್ಜ ಅವರು ದೇವರ ನುಡಿ ನುಡಿದರು.
ಮುಖಂಡರಾದ ಆಶೀಷ ಹುಕ್ಕೇರಿ, ರಮೇಶ ಕಮ್ಮಾರ, ರವಿ ಹಿಟಣೆ, ಸುರೇಂದ್ರ ಕಬಾಡೆ, ಪುಟ್ಟು ಕಬಾಡೆ, ಸತೀಶ ಕಬಾಡೆ, ಗಂಗಾಧರ ಹಿರೇಮಠ, ಸಚಿನ ಮಾನೆ, ಕೇದಾರಿ ಗಿಡ್ಡ, ಪುಂಡಲೀಕ ಹಿಟಣೆ, ಮಲ್ಲಪ್ಪ ಕಬಾಡೆ ಇತರರಿದ್ದರು.

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…