ಇಂದು ಪುಣ್ಯಸ್ಮರಣೆ; ಮಹಾದಾಸೋಹಿ ಸಿದ್ಧಗಂಗೆಯ ಡಾ.ಶಿವಕುಮಾರ ಶ್ರೀಗಳು

blank

| ಎಂ. ಬಾಲಚಂದ್ರ, (ಲೇಖಕರು ಉಪನ್ಯಾಸಕ ಮತ್ತು ಹವ್ಯಾಸಿ ಬರಹಗಾರ)

ಅವಿದ್ಯೆ ಅಜ್ಞಾನ ಹಸಿವು ತೃಷೆಗಳ ಹರಿಸಿ

blank

ಭುವಿಯೊಳಗೆ ಅಧ್ಯಾತ್ಮ ವಿಜ್ಞಾನಮಂ ಹರಡಿ

ಸುವಿಶಾಲಭಾವದಿಂ ಲೋಕೋದ್ಧಾರವಂಗೈದ

ಶ್ರೀ ಶಿವಕುಮಾರಯತೀಂದ್ರ ಚರಣಾಂಬುಜಕೆ ಶರಣು

ಭಾರತೀಯ ಋಷಿ ಪರಂಪರೆಯ ಬಗ್ಗೆ ಓದಿದೆ, ‘ವಸುಧೈವ ಕುಟುಂಬಕಂ’ ಎಂಬ ಮಹಾನ್ ತತ್ವವನ್ನು ಕಂಡೆ. ಶ್ರೀರಾಮನ ಬಗ್ಗೆ ಓದಿದೆ, ಕರ್ತವ್ಯ ಪರಿಪಾಲನೆ ಹಾಗೂ ಮಾನವೀಯ ಮೌಲ್ಯಗಳನ್ನು ಕಂಡೆ. ಶ್ರೀಕೃಷ್ಣನ ಬಗ್ಗೆ ಓದಿದೆ, ಅಪ್ರತಿಮ ಕ್ಷಾತ್ರತೇಜಸ್ಸನ್ನು ಕಂಡೆ. ಭಗವಾನ್ ಬುದ್ಧನ ಬಗ್ಗೆ ಓದಿದೆ, ಕರುಣೆಯನ್ನು ಕಂಡೆ. ಬಸವಣ್ಣನವರ ಬಗ್ಗೆ ಓದಿದೆ, ‘ಎಲ್ಲರೂ ನನ್ನವ’ರೆನ್ನುವ ಪರಿಶುದ್ಧ ಭಾವವನ್ನು ಕಂಡೆ. ಸ್ವಾಮಿ ವಿವೇಕಾನಂದರ ಬಗ್ಗೆ ಓದಿದೆ, ಸನಾತನ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಕಂಡೆ. ಈ ಎಲ್ಲ ಮಹಾನುಭಾವರ ಗುಣಗಳನ್ನು ಮಹಾದಾಸೋಹಿ ಸಿದ್ಧಗಂಗೆಯ ಡಾ. ಶಿವಕುಮಾರ ಶ್ರೀಗಳಲ್ಲಿ ಕಂಡೆ.

ಅದು 1968ನೇ ಇಸವಿ. ಭಾರತ ಭೀಕರ ಬರಗಾಲದಿಂದ ತತ್ತರಿಸುತ್ತಿತ್ತು. ಒಂದು ಹೊತ್ತಿನ ಊಟವಿರಲಿ, ಒಂದು ತುತ್ತು ಅನ್ನಕ್ಕೂ ಜನರು ಪರದಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಜನರ ಹಸಿವನ್ನು ನೀಗಿಸುವ ಕಾಯಕದಲ್ಲಿ ಹಗಲಿರುಳೆನ್ನದೆ ದುಡಿಯುತ್ತಿದ್ದರು. ಈ ವಿಷಯ ತಿಳಿದ ಸುತ್ತಮುತ್ತಲಿನ ಹಳ್ಳಿಗಳ ಜನ ಸಿದ್ಧಗಂಗೆಯತ್ತ ಧಾವಿಸಿ ಬರುತ್ತಿದ್ದರು. ಸಾವಿರಾರು ಜನರನ್ನು ಮಠದ ಆವರಣದಲ್ಲಿ ಸಿಬ್ಬಂದಿ ಸಾಲಾಗಿ ಕೂರಿಸಿ ಅನ್ನ ನೀಡುತ್ತಿದ್ದರು. ಶ್ರೀಗಳು ಆ ಸಿಬ್ಬಂದಿಯ ಹಿಂದೆಯೇ ಪ್ರತಿ ಸಾಲಿನಲ್ಲೂ ಸಾಗುತ್ತಿದ್ದರು. ಒಂದು ದಿನ ಒಬ್ಬರು, ‘ಸ್ವಾಮೀಜಿ, ಮಠದ ಸಿಬ್ಬಂದಿಯೇ ಎಲ್ಲರಿಗೂ ಊಟ ಬಡಿಸುತ್ತಾರೆ. ಅವರ ಹಿಂದೆ ಪ್ರತಿಯೊಂದು ಸಾಲಿನಲ್ಲೂ ನೀವು ಹೋಗುವ ಅವಶ್ಯಕತೆ ಇದೆಯೇ?’ ಎಂದು ಕೇಳಿದರು.

ಆಗ ಶ್ರೀಗಳು, ‘ಇಲ್ಲಿಯವರೆಗೂ ನಡೆದು ಬರುವ ಶಕ್ತಿ ಇದ್ದವರು ಮಾತ್ರ ಇಲ್ಲಿಗೆ ಬಂದಿದ್ದಾರೆ. ವಯಸ್ಸಾದವರು, ಚಿಕ್ಕ ಮಕ್ಕಳು ಮನೆಗಳಲ್ಲೇ ಇದ್ದಾರೆ. ಅವರಿಗಾಗಿ ಊಟ ತೆಗೆದುಕೊಂಡು ಹೋಗಲು ಯಾರಾದರೂ ಒಬ್ಬರು ಇಲ್ಲಿಗೆ ಬಂದಿರುತ್ತಾರೆ. ಬಡಿಸುವ ಸಿಬ್ಬಂದಿಗೆ ಈ ವಿಚಾರ ಗೊತ್ತಿರುವುದಿಲ್ಲ. ನಾನು ಅವರ ಹಿಂದೆ ಇದ್ದು, ಊಟ ತೆಗೆದುಕೊಂಡು ಹೋಗಲು ಬಯಸುವ ಭಕ್ತರ ಪಾತ್ರೆಗಳಿಗೆ ತುಂಬಿಸಿ ಕಳಿಸಲು ಹಿಂದೆ ಓಡಾಡುತ್ತೇನೆ’ ಎಂದರು. ಶ್ರೀಗಳ ಮಾತೃಹೃದಯಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಈ ಸನ್ನಿವೇಶವನ್ನು ಪ್ರತ್ಯಕ್ಷವಾಗಿ ಕಂಡ ತುಮಕೂರಿನ ಹಾಸ್ಯಕಲಾವಿದ ಈಶ್ವರಯ್ಯ ಈ ಘಟನೆಯನ್ನು ಹೇಳಿದಾಗ ನನ್ನ ಕಣ್ಣುಗಳಲ್ಲಿ ನೀರು ಜಿನುಗಿತ್ತು. ಶ್ರೀಗಳಲ್ಲಿದ್ದ ಇಂತಹ ದಾಸೋಹ ತತ್ವವನ್ನು ಕಂಡೇ ಇಡೀ ಜಗತ್ತು ಅವರನ್ನು ‘ಮಹಾದಾಸೋಹಿ’ ಎಂದು ಕರೆದಿದ್ದು.

‘ಬಸವಾದಿ ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯ. ಕಾಯಕ-ದಾಸೋಹ ಇವೆರಡೂ ಒಂದೇ ನಾಣ್ಯದ ಎರಡು ಮುಖ. ಒಂದಕ್ಕೊಂದು ಪೂರಕ’ ಎಂಬುದು ಡಾ. ಶಿವಕುಮಾರ ಶ್ರೀಗಳ ಅಭಿಮತವಾಗಿತ್ತು. ಅವರು ‘ತಮ್ಮ ಜೀವನವೇ ಒಂದು ಸಂದೇಶ’ವೆಂಬಂತೆ ಬದುಕಿದವರು. ಲೋಕದ ಸಂತೆಯೊಳಗಿದ್ದೇ ಸಂತರಾದವರು. ಜಾತೀಯತೆ, ಅಂಧ ಶ್ರದ್ಧೆ, ಮೇಲá-ಕೀಳುಗಳನ್ನು ಧಿಕ್ಕರಿಸಿ ಸಮಾಜ ಸುಧಾರಣೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದವರು. ದಾಸೋಹವೆಂದರೆ ಕೇವಲ ಅನ್ನದಾಸೋಹ ಮಾತ್ರವಲ್ಲ. ಬಸವಣ್ಣನವರು ತಮ್ಮ ವಚನಗಳಲ್ಲಿ ಲೋಕದಲ್ಲಿರುವ ವಿವಿಧ ರೀತಿಯ ದಾಸೋಹಗಳ ಪರಿಚಯವನ್ನು ನೀಡಿದ್ದಾರೆ. ‘ಭಕ್ತಶ್ರೇಷ್ಠನಾದವನು ಭಕ್ತಿ ದಾಸೋಹ ಮಾಡಬಹುದು. ಯುಕ್ತನಾದವನು ಯುಕ್ತಿ ದಾಸೋಹವ ಮಾಡಬಹುದು. ಐಕ್ಯಸ್ಥಲವ ಸಾಧಿಸಿದವನು ಮಮಕಾರ ದಾಸೋಹವ ಮಾಡಬಹುದು’ ಎಂದು ಹೇಳಿದ್ದಾರೆ. ಅದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಶಿವಕುಮಾರ ಶ್ರೀಗಳು.

ಶ್ರೀಗಳು ತಮ್ಮ ಸನ್ಯಾಸತ್ವ ಸ್ವೀಕಾರದ ದಿನದಿಂದ ಲಿಂಗೈಕ್ಯರಾಗುವವರೆಗಿನ 88 ವರ್ಷಗಳ ಬದುಕಿನಲ್ಲಿ ಒಂದೇ ಒಂದು ದಿನವೂ, ಒಂದೇ ಒಂದು ಕ್ಷಣವೂ ತಮಗಾಗಿ ಬದುಕಿದವರಲ್ಲ! ಅವರ ಪ್ರತಿಯೊಂದು ಉಸಿರಾಟವೂ ಕಾಯಕ ಮತ್ತು ದಾಸೋಹಕ್ಕೇ ಮೀಸಲಾಗಿತ್ತು. ‘ಸಂನ್ಯಾಸಿ’ ಎಂದರೆ, ‘ತನ್ನ ಜೀವನವನ್ನು ಸಮಾಜಕ್ಕಾಗಿ ತ್ಯಾಗ ಮಾಡಿದವರು’ ಎಂದರ್ಥ. ಶ್ರೀಗಳು ಅದಕ್ಕೆ ಅನ್ವರ್ಥರೆಂಬಂತೆ ಜೀವಿಸಿದರು. ‘ದಾಸೋಹ’ವೆಂದರೆ ಕೇವಲ ‘ದಾನಮಾಡುವುದು’ ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಜಗತ್ತಿಗೆ, ‘ದಾಸೋಹ’ವೆಂಬ ಪವಿತ್ರ ಪದಕ್ಕೆ ಒಂದು ಹೊಸ ಸ್ವರೂಪವನ್ನೇ ನೀಡಿದರು. ತನುಮನಧನಗಳನ್ನು ಗುರುಲಿಂಗಜಂಗಮಕ್ಕರ್ಪಿಸುವುದೇ ತ್ರಿವಿಧ ದಾಸೋಹವೆಂದರು. ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹ, ಆಶ್ರಯ ದಾಸೋಹ, ಅಭಯ ದಾಸೋಹ, ಭಕ್ತಿ ದಾಸೋಹ, ಯುಕ್ತಿ ದಾಸೋಹ ಹಾಗೂ ಮಮಕಾರ ದಾಸೋಹಗಳೂ ಇವೆ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟರು.

ಜನವರಿ 21 ದಾಸೋಹ ದಿನ

ಡಾ. ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗಿದೆ. ಇದು ನಿಜವಾಗಿಯೂ ಸಾರ್ಥಕತೆಯನ್ನು ಪಡೆಯಬೇಕಾದರೆ, ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನದಾನ ಮಾಡಬೇಕು. ಕಷ್ಟದಲ್ಲಿ ಇರುವವರಿಗೆ ನಿಷ್ಕಲ್ಮಶ ಮನಸ್ಸಿನಿಂದ ಕೈಲಾದ ಸಹಾಯ ಮಾಡಬೇಕು. ಆಗ ಮಾತ್ರ ಈ ದಾಸೋಹ ದಿನಕ್ಕೊಂದು ಅರ್ಥ ಸಿಗುತ್ತದೆ. ಅದೇ ಶಿವಕುಮಾರ ಶ್ರೀಗಳಿಗೆ ನೀಡುವಂತಹ ನಿಜವಾದ ಗೌರವ.

ಖೋ ಖೋ ವಿಶ್ವಕಪ್​ನಲ್ಲಿ ಟಿ. ನರಸೀಪುರ ಪ್ರತಿಭೆ ಸಾಧನೆ; ಮಗಳ ಪರಿಶ್ರಮ ನೆನೆದು ಪೋಷಕರು ಭಾವುಕ, ತಂದೆ ಹೇಳಿದ್ದಿಷ್ಟು | B Chaitra

 

Share This Article

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…