ಅಕ್ರಮ ಮದರಸಾಗಳ ವಿರುದ್ಧ ಕ್ರಮ; ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ

ಭೋಪಾಲ್​: ರಾಜ್ಯದಲ್ಲಿರುವ ಅಕ್ರಮ ಮದರಸಾಗಳು ಮತ್ತು ಧರ್ಮಾಂಧತೆ ಬೋಧಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಧ್ಯಪ್ರದೇಶದ ಸರ್ಕಾರ ಮುಂದಾಗಿದೆ. ಧರ್ಮಾಂಧತೆಯನ್ನು ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳಲಾಗದು ಎಂದು ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಘೋಷಿಸಿದರು. ಗೃಹ ಸಚಿವ ನರೋತ್ತಮ್​ ದಾಸ್​ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಧರ್ಮಾಂಧತೆ ಮತ್ತು ಉಗ್ರವಾದವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚೌಹಾಣ್​ ಟ್ವೀಟ್​ ವಡಿದ್ದಾರೆ. ಮಕ್ಕಳಿಗೆ ಉಗ್ರವಾದವನ್ನು ಬೋಧಿಸಲಾಗುತ್ತಿದೆಯೇ … Continue reading ಅಕ್ರಮ ಮದರಸಾಗಳ ವಿರುದ್ಧ ಕ್ರಮ; ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ