ಹೆಂಡತಿಯನ್ನು ಎಷ್ಟು ಸಮಯದವರೆಗೆ ನೋಡುತ್ತೀರಿ.. L&T Chairman ಹೇಳಿಕೆ ವೈರಲ್​​; ಕಂಪನಿ ಸ್ಪಷ್ಟನೆ ಹೀಗಿದೆ

blank

ನವದೆಹಲಿ: ಲಾರ್ಸನ್ ಅಂಡ್ ಟೂಬ್ರೊ ಅಧ್ಯಕ್ಷ( L&T Chairman) ಎಸ್ ಎನ್ ಸುಬ್ರಹ್ಮಣ್ಯನ್ ಅವರು ನೀಡಿರುವ ಹೇಳಿಕೆಯು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅದರಲ್ಲಿ ಅವರು ಸಿಬ್ಬಂದಿಗೆ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡುವಂತೆ ಹಾಗೂ ಶನಿವಾರವೂ ಕೆಲಸ ಮಾಡುವಂತೆ ಹೇಳಿದ್ದಾರೆ.

blank

ಇದನ್ನು ಓದಿ: ಪ್ರೇಮಾನಂದ ಮಹಾರಾಜ್‌ ಆಸ್ಥಾನದಲ್ಲಿ ‘ಸ್ಟಾರ್​’ ದಂಪತಿ; ಮಕ್ಕಳೊಂದಿಗೆ ವಿರಾಟ್​ & ಅನುಷ್ಕಾ ಹೋಗಿದ್ದೇಕೆ? | Virat Kohli & Anushka

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರವು ಸುಬ್ರಹ್ಮಣ್ಯನ್​ ಅವರು, ವಾಸ್ತವವಾಗಿ ವಾರಂತ್ಯದಲ್ಲಿ ಕೆಲಸ ಮಾಡಲು ಹಿಂಜರಿಯಬಾರದು ಎಂದು ಹೇಳಿದರು. ಕೊನೆಯಲ್ಲಿ ನೀವು ನಿಮ್ಮ ಹೆಂಡತಿಯನ್ನು ಎಷ್ಟು ದಿನ ನೋಡುತ್ತೀರಿ?. ಹೆಂಡತಿಯರು ತಮ್ಮ ಗಂಡನನ್ನು ಎಷ್ಟು ದಿನ ನೋಡಬಹುದು? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯೆಗಳು ಬರುತ್ತಿವೆ. ಸರ್ ನಿಮ್ಮ ಉದ್ಯೋಗಿಗಳು ಭಾನುವಾರದಂದು ತಮ್ಮ ಹೆಂಡತಿಯರನ್ನು ನೋಡದಿದ್ದರೆ ಬೇರೆಯವರು ಅವರನ್ನು ನೋಡುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ ಇನ್ಫೋಸಿಸ್​ ನಾರಾಯಣಮೂರ್ತಿ ಮತ್ತು ಭಾರತ್‌ಪೇನ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಅವರ ಫೋಟೋ ಬಳಿಸಕೊಂಡು ಮಿಮ್​ಗಳನ್ನು ಮಾಡಿ ವೈರಲ್​​ ಮಾಡುತ್ತಿದ್ದಾರೆ.

ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ

ಈ ಹೇಳಿಕೆಯಲ್ಲಿ ರಾಷ್ಟ್ರ ನಿರ್ಮಾಣವು ನಮ್ಮ ಆದೇಶದ ತಿರುಳು ಎಂದು ಹೇಳಲಾಗಿದೆ. 8 ದಶಕಗಳಿಗೂ ಹೆಚ್ಚು ಕಾಲ ನಾವು ಭಾರತದ ಮೂಲಸೌಕರ್ಯ, ವ್ಯಾಪಾರ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ನವೀಕರಿಸುವಲ್ಲಿ ತೊಡಗಿದ್ದೇವೆ. ಈ ದಶಕ ಭಾರತಕ್ಕೆ ಸೇರಿದ್ದು ಎಂದು ನಾವು ನಂಬುತ್ತೇವೆ. ಬೆಳವಣಿಗೆಯನ್ನು ಮತ್ತಷ್ಟು ಕೊಂಡೊಯ್ಯಲು ಪ್ರಯತ್ನಗಳನ್ನು ಮಾಡಬಹುದಾದ ಸಮಯ ಇದು, ಕೆಲಸದ ಸಂಸ್ಕೃತಿಗೆ ಸಂಬಂಧಿಸಿದಂತೆ ಎಲ್ & ಟಿ ಅಧ್ಯಕ್ಷ ಸುಬ್ರಮಣಿಯನ್ ಅವರು ಮಾಡಿದ ಕಾಮೆಂಟ್‌ಗಳಿಗೆ ಕಂಪನಿಯು ಸ್ಪಷ್ಟೀಕರಣವನ್ನು ನೀಡಿದೆ.

ನಮ್ಮ ಅಧ್ಯಕ್ಷರ ಕಾಮೆಂಟ್ ಬೆಳವಣಿಗೆಗೆ ಸಂಬಂಧಿಸಿದೆ ಎಂದು ಎಲ್ & ಟಿ ಕಂಪನಿ ಹೇಳಿದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ನಾವು ಅಸಾಧಾರಣ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂಬುದು ಅದರ ಅರ್ಥ. ಕಂಪನಿಯಲ್ಲಿ ಉತ್ಸಾಹವಿರುವ ಕೆಲಸದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ. ಇದರಿಂದ ಗುರಿಗಿಂತ ಹೆಚ್ಚಿನದನ್ನು ಸಾಧಿಸಬಹುದು ಎಂದು ಹೇಳಿದೆ.

blank

L&T ಚೇರ್ಮನ್ ಸುಬ್ರಮಣಿಯನ್ ಅವರು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಾರಾಯಣ ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಸೂಚಿಸಿದರು. ಇದು ಬಾರಿ ವಿವಾದವನ್ನು ಉಂಟುಮಾಡಿತ್ತು.(ಏಜೆನ್ಸೀಸ್​​)

ಕೆನಡಾ ಪ್ರಧಾನಿ ಹುದ್ದೆ ರೇಸ್​ನಲ್ಲಿ ಭಾರತೀಯ ಮೂಲದ ಅಭ್ಯರ್ಥಿ; ಚಂದ್ರ ಆರ್ಯ ಕರ್ನಾಟಕದವರು ಎಂಬುದು ಗೊತ್ತೆ? | Chandra Arya

Share This Article

ಪುಷ್ಯ ನಕ್ಷತ್ರಕ್ಕೆ ಸೂರ್ಯನ ಎಂಟ್ರಿ! ಈ ತಿಂಗಳು 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Astrology

Astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನಿಸಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಅವರ…

ಮುಖದ ಸೌಂದರ್ಯಕ್ಕೆ ಐಸ್​​ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits

Ice Facial Benefits:  ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ಮಾರುಕಟ್ಟೆಯಲ್ಲಿ…

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…